ಜಿಲ್ಲಾ ವೀರಶೈವ ಸಮಾಜದ ಸರ್ವಸದಸ್ಯರ ಸಭೆ

0
35

ಕಲಬುರಗಿ: ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ವೀರಶೈವ ಸಮಾಜದ ಸರ್ವಸದಸ್ಯರ ಸಭೆ ನಡೆಯಿತು.

ಈ ಸಭೆಯಲ್ಲಿ ಪ್ರಮುಖವಾಗಿ ಸಮಾಜ ಸಂಘಟನೆ ಮಾಡುವ ಕುರಿತು ಹಿರಿಯರಾದ ಸಮಾಜದ ಉಪಾಧ್ಯಕ್ಷ ಕಲ್ಯಾಣಪ್ಪ ಮಳಖೇಡ ಅವರು ಮಾತನಾಡುತ್ತಾ ಜಿಲ್ಲೆಯ ಪ್ರತಿ ತಾಲೂಕಿನಲ್ಲಿ ಬಲಿಷ್ಠ ಸಂಘಟನೆ ಕಟ್ಟುವುದು ಅನಿವಾರ್ಯವಾಗಿದೆ ಎಂದರು.

Contact Your\'s Advertisement; 9902492681

ಗೌರವಾಧ್ಯಕ್ಷ ಜಿ.ಡಿ. ಅಣಕಲ ಅವರು ಮಾತನಾಡುತ್ತಾ ಸಮಾಜಕ್ಕಾಗಿ ನಮ್ಮನ್ನು ಕೊಡುಗೆ ಕೊಟ್ಟಿದ್ದೇವೆ ಎಂದರು. ಎಸ್.ವಿ.ಮಠಪತಿ ಮಾತನಾಡಿ ಸಮಾಜ ಸಂಘಟನೆ ಬಲವರ್ಧನೆ ಮಾಡಲು ಮನವಿ ಮಾಡಿದರು. ಈ ಸಭೆಯ ಅಧ್ಯಕ್ಷತೆ ವಹಿಸಿದ ಅರುಣಕುಮಾರ ಪಾಟೀಲ್ ಮಾತನಾಡುತ್ತಾ ಸಮಾಜ ಬಲಿಷ್ಠವಾಗಿದ್ದರೂ ರಾಜಕೀಯವಾಗಿ ಸಂಘಟನಾತ್ಮಕವಾಗಿ ನಾವು ಬಹಳಷ್ಟು ದುರ್ಬಲವಾಗಿರುವುದು ಅತ್ಯಂತ ಖೇದನೀಯ ಎಂದು ಹೇಳಿದರು.

ಈ ಸಂದರ್ಭದಲ್ಲಿ ಎಲ್ಲರ ಸಮ್ಮುಖದಲ್ಲಿ ಸರ್ವಾನುಮತದಿಂದ ಸಚಿನ ಸ್ವಂತ ಅವರನ್ನು ಯುವ ಘಟಕದ ಜಿಲ್ಲಾಧ್ಯಕ್ಷರಾಗಿ ನೇಮಕ ಮಾಡಲಾಯಿತು. ಹಾಗೂ ಶಾಂತಕುಮಾರ ವಾಡೆದ ಅವರನ್ನು ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಈ ಸಭೆಯಲ್ಲಿ ಕಾರ್ಯಧ್ಯಕ್ಷ ಸುಭಾಷ ಬಿಜಾಪುರೆ, ಕಲ್ಯಾಣಪ್ಪ ಗೋದಿ, ಬಸವರಾಜ ಮಾಡಗಿ, ಡಾ. ಶ್ರೀಶೈಲ ಗೊಳಿ, ವಿಜಂಯಕುಮಾರ ಸಾತನೂರ, ಚಂದ್ರಶೇಖರ ತಳ್ಳಳ್ಳಿ, ಸಾತಪ್ಪ ಪಟ್ಟಣಕರ್, ಶರಣಗೌಡ ಪಾಟೀಲ್, ಬಸವರಾಜ ಮಂಗಲಗಿ, ಸಂಗನಗೌಡ ಪಾಟೀಲ್, ಹನುಮಂತ್ರಾಯ ಪಾಟೀಲ್, ರಾಜಶೇಖರ ಅಲ್ಲದ, ರಮೇಶ ಪಾಟೀಲ್, ಮಹಾಂತೇಶ ಪಾಟೀಲ್, ಪ್ರಶಾಂತ ಗುಡ್ಡ, ಸಂತೋಷ ಪಾಟೀಲ್, ವೀರು ಪಾಟೀಲ್ ರಾಯಕೋಡ, ಶಿವಶರಣಪ್ಪ ಮಣಕಂಟಿ, ವಿ.ಸಿ ಪಾಟೀಲ್, ಶಿವಕುಮಾರ ಧರಪ್ಪಗೋಳ, ಸಿದ್ದಣ್ಣಪ್ಪ ಹೊದಲೂರ, ಶರಣು ಭೂಸನೂರ, ಪರಮೇಶ್ವರ ಗುಡ್ಡ ಮತ್ತಿತರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here