ಮರತೂರ ವಿಎಸ್ ಎಸ್ ಅಧ್ಯಕ್ಷರಾಗಿ ರವೀಂದ್ರ ನರೋಣಿ ಅವಿರೋಧ ಆಯ್ಕೆ

0
122

ಕಲಬುರಗಿ: ಶಹಾಬಾದ ತಾಲೂಕಿನ ಮರತೂರ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ರವೀಂದ್ರ ತಂದೆ ಬಸವಣಪ್ಪ ನರೋಣಿ, ಉಪಾಧ್ಯಕ್ಷರಾಗಿ ಕರಬಸಪ್ಪ ಶಿವಶರಣಪ್ಪ ರಾಯನಾಡ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಮನೋಹರ. ಎಚ್ ತಿಳಿಸಿದ್ದಾರೆ.

ನಂತರ ಮಾತನಾಡಿದ ಅಧ್ಯಕ್ಷ ರವೀಂದ್ರ ನರೋಣಿ ಅವರು, ಅವಿರೋಧವಾಗಿ ಅಧ್ಯಕ್ಚನನ್ನಾಗಿ ಆಯ್ಕೆ ಮಾಡಿದ ಎಲ್ಲಾ ಸದಸ್ಯರಿಗೂ ಹಾಗೂ ಮುಖಂಡರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದರು. ಇದಲ್ಲದೇ ಗ್ರಾಮಸ್ಥರು ಹಾಗೂ ಸಂಘದ ಎಲ್ಲಾ ನಿರ್ದೇಶಕರ ಸಹಕಾರದಿಂದ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ. ವ್ಯವಸಾಹಯ ಸಹಕಾರ ಸಂಘಕ್ಕೆ ಬಂದಿರುವ ಸಹಾಯ, ಸೌಲತ್ತುಗಳನ್ನು ಎಲ್ಲರಿಗೂ ತಲುಪಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ವಿರೋಧ ಪಕ್ಷದ ನಾಯಕ ಶಿವಾನಂದ ಪಾಟೀಲ, ಎಪಿಎಂಸಿ ಸದಸ್ಯರಾದ ಸಿದ್ದರಾಮ ಅಫಜಲಪೂರಕರ್, ಮುಖಂಡರಾದ ಅಜೀತಕುಮಾರ ಪೊಲೀಸ್ ಪಾಟೀಲ, ಶಾಮರಾವ್ ಗೌಡ ಪಾಟೀಲ, ಶರಣಬಸಪ್ಪ ಪಟೇಲ್, ಹುಣಚಪ್ಪ ಮಸಗಲ್, ಮಲ್ಲಣ್ಣ ಮಸಗಲ್, ದೇವಾನಂದ ಸಾಹು, ರಮೇಶ ಸಾಹು, ರಮೇಶ ರೆಡ್ಡಿ, ಸಿದ್ದಲಿಂಗ ಪೂಜಾರಿ, ಗುರು ಖಂಬಾ, ಶಮಶೀರ್ ಗೋಳಾ, ಶರಣು, ಬಾಬಾ, ಸಂಜೀವಕುಮಾರ ಗರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here