ನಮ್ಮವರು ಎಂದು ಬದುಕು ರೂಪಿಸಿಕೊಳ್ಳಬೇಕು: ಪೂಜ್ಯ ಡಾ. ಶರಣಬಸವಪ್ಪ ಅಪ್ಪಾ

0
95

ಚಿಂಚೋಳಿ: ಇಂದಿನ ಆಧುನಿಕ ಯುಗದಲ್ಲಿ ಪ್ರತಿಯೊಬ್ಬರು ನಾನು, ನನ್ನಿಂದ ಎನ್ನುವ ಸ್ವಾರ್ಥ ಭಾವನೆಯನ್ನು ತೊರೆದು ನಾವು, ನಮ್ಮವರು ಎಂದು ಬದುಕು ರೂಪಿಸಿಕೊಳ್ಳಬೇಕು ಎಂದು ಕಲಬುರ್ಗಿಯ ಶ್ರೀ ಶರಣಬಸವೇಶ್ವರ ಸಂಸ್ಥಾನದ ಪೂಜ್ಯ ಶ್ರೀ ಡಾ. ಶರಣಬಸವಪ್ಪ ಅಪ್ಪಾ ನುಡಿದರು.

ಮತಕ್ಷೇತ್ರದ ತೇಗಲತಿಪ್ಪಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿದ ದೇವಾಲಯದಲ್ಲಿ ಶರಣಬಸವೇಶ್ವರರ ಮೂರ್ತಿ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕೃಷಿಯಲ್ಲಿ ನಿಸ್ವಾರ್ಥ ಭಾವನೆಯಿಂದ ದುಡಿಯುವವನೇ ನಿಜವಾದ ಕಾಯಕಜೀವಿ ಎಂಬುದು ಪ್ರತಿಯೊಬ್ಬರು ಅರಿಯಬೇಕು ಎಂದರು.
೧೨ನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣನವರು ಹಾಗೂ ಶರಣಬಸವೇಶ್ವರರು ದೇಶದಲ್ಲಿನ ಅಂಧಕಾರ, ಅಜ್ಞಾನ, ಮೂಢನಂಬಿಕೆ, ಸಮಾಜದ ಸುಧಾರಣೆಗೆ ದುಡಿದ ಮಹಾನ್ ಚೇತನಮೂರ್ತಿಗಳು, ಅವರ ತತ್ವ ಆದರ್ಶಗಳು ಜೀವನದಲ್ಲಿ ಮೈಗೂಡಿಸಿಕೊಂಡು ಬದುಕಬೇಕು. ಗ್ರಾಮದಲ್ಲಿ ಶರಣಬಸವೇಶ್ವರರ ಮೂರ್ತಿ ಪ್ರತಿಷ್ಠಾಪಿಸಿ ಆರಾಧಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಪ್ರತಿಯೊಬ್ಬರೂ ಸನ್ಮಾರ್ಗದಲ್ಲಿ ಸಾಗಬೇಕು ಎಂದು ಮಾತನಾಡಿದರು.

Contact Your\'s Advertisement; 9902492681

ಸೇಡಂ ಮತ್ತು ಚಿಂಚೋಳಿ ನನ್ನ ಎರಡು ಕಣ್ಣುಗಳಿದ್ದಂತೆ. ಸುಲೇಪೇಟ ವಲಯದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿದ್ದು, ಶಾಸಕ ಅವಿನಾಶ ಜಾಧವ್ ಅವರೊಂದಿಗೆ ಎರಡು ಕ್ಷೇತ್ರಗಳ ಸಮಗ್ರ ಅಭಿವೃದ್ಧಿಗೊಳಿಸುವ ಮೂಲಕ ಜಿಲ್ಲೆಯಲ್ಲಿ ಮಾದರಿಯ ಕ್ಷೇತ್ರವನ್ನಾಗಿ ರೂಪಿಸಲಾಗುತ್ತದೆ. ಪ್ರತಿಯೊಬ್ಬರೂ ಪೂಜ್ಯರ ಮಾರ್ಗದಲ್ಲಿ ಸೂಫಿ, ಸಂತರ, ಶರಣರ ತೋರಿದ ದಾರಿಯಲ್ಲಿ ಸಾಗಬೇಕು.  – ರಾಜಕುಮಾರ ಪಾಟೀಲ್ ತೆಲ್ಕೂರ, ಶಾಸಕರು ಸೇಡಂ.

ಹಾರಕೂಡದ ಶ್ರೀ ಡಾ.ಚನ್ನವೀರ ಶಿವಾಚಾರ್ಯರು ಮಾತನಾಡಿ, ಹೃದಯವಂತರು, ಭಕ್ತಿವಂತರ ಪುಣ್ಯ ಕ್ಷೇತ್ರ ತೇಗಲತಿಪ್ಪಿ ಗ್ರಾಮವಾಗಿದೆ. ತೇಗಲತಿಪ್ಪಿ ಗ್ರಾಮದಲ್ಲಿ ಶರಣರ ಆರಾಧಕರು ಹೆಚ್ಚಿಗೆ ಇದ್ದು, ಪ್ರತಿಯೊಬ್ಬರೂ ಸಮಾನತೆಯಿಂದ ಉತ್ತಮ ಬದುಕು ರೂಪಿಸಿಕೊಂಡು ಸಾಗಬೇಕು ಎಂದು ಮಾತನಾಡಿದರು. ಇದಕ್ಕೂ ಮುಂಚೆ ಗ್ರಾಮದಲ್ಲಿ ಮುತೈದೆಯರು ತಂಬಿಗೆ ಹೊತ್ತು ಡೊಳ್ಳು ವಾದ್ಯಗಳೊಂದಿಗೆ ದೇವಾಲಯದವರೆಗೆ ಕಳಶ ಮೆರವಣಿಗೆಯು ಅದ್ಧೂರಿಯಿಂದ ನೆರವೇರಿಸಲಾಯಿತು. ೧೧ ದಿನಗಳ ಕಾಲ ನಿರಂತರವಾಗಿ ಮಹಾದಾಸೋಹಿ ಶರಣಬಸವೇಶ್ವರರ ಪುರಾಣ ನೆರವೇರಿತು.

ಕ್ಷೇತ್ರದಲ್ಲಿ ಧಾರ್ಮಿಕ ಕಾರ್ಯಗಳು ನಿರಂತರವಾಗಿ ಸಾಗಬೇಕು. ಶರಣಬಸವೇಶ್ವರರ ಪೂಜ್ಯರನ್ನು ಪ್ರತಿಷ್ಠಾಪಿಸಿ ಆರಾಧಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ರೈತರು ಬೆಳೆದ ತೊಗರಿ ಬೆಳೆಯನ್ನು ೧೦ ಕ್ವಿಂಟಲ್ ದಿಂದ ೨೦ ಕ್ವಿಂಟಲ್ ಹೆಚ್ಚಿಸುವ ಮೂಲಕ ರೈತರಿಗೆ ಅನುಕೂಲ ಕಲ್ಪಿಸಲಾಗಿದೆ. ರೈತರು ಸದುಪಯೋಗ ಪಡೆದುಕೊಳ್ಳಬೇಕು. -ಡಾ.ಅವಿನಾಶ ಜಾಧವ್ ಶಾಸಕರು ಚಿಂಚೋಳಿ.

ಈ ಸಂದರ್ಭದಲ್ಲಿ ಭರತನೂರಿನ ಚಿಕ್ಕಗುರುನಂಜೇಶ್ವರ ಮಹಾಸ್ವಾಮಿ, ರಟಕಲನ ಶ್ರೀ ಸಿದ್ಧರಾಮ ಮಹಾಸ್ವಾಮಿ, ಸಂಸದ ಡಾ. ಉಮೇಶ ಜಾಧವ್, ಕಾಂಗ್ರೇಸ್ ವಕ್ತಾರ ಸುಭಾಷ ರಾಠೋಡ, ಸಾಂಸತಿಕ ಸಂಘಟಕ ವಿಜಯಕುಮಾರ ತೇಗಲತಿಪ್ಪಿ, ಮುಕುಂದ ದೇಶಪಾಂಡೆ, ವಿಜಯಕುಮಾರ ಚೇಂಗಟಾ, ಗೌತಮ ಪಾಟೀಲ್, ಅಬ್ದುಲ್ ಬಾಸೀದ್, ಭೀಮರಾವ ತೇಗಲತಿಪ್ಪಿ, ಸಂತೋಷ ಗಡಂತಿ, ಲಕ್ಷ್ಮಣ ಆವಂಟಿ, ಮಾರುತಿ ಗಾಂವ್ಕರ್, ಜಗನ್ನಾಥ ಪೂಜಾರಿ, ಚಂದ್ರಶೇಖರ ಹರಸೂರ್, ಅನೀಲಕುಮಾರ ಜಮಾದಾರ, ಹಣಮಂತರಾವ ಪೊಲೀಸ್ ಪಾಟೀಲ್, ಜಗನ್ನಾಥ ಪೂಜಾರಿ, ಗುಂಡಪ್ಪ ರೆಡ್ಡಿ, ದಯಾನಂದ ಪೆಂಚನಪೆಳ್ಳಿ, ಬಸವರಾಜ ವಠಾರ, ರವಿರಾಜ ಕೊರವಿ, ಮಲ್ಲಿಕಾರ್ಜುನ ಪಾಟೀಲ್, ಸೋಮಶೇಖರ ಪಾಟೀಲ್, ಪ್ರಭು ಪಾಟೀಲ್, ಸಿದ್ದರಾಮ ತೇಗಲತಿಪ್ಪಿ, ಪ್ರವೀಣ ತೇಗಲತಿಪ್ಪಿ, ಶಿವರಾಜ ಪಾಟೀಲ್, ನಾಗೀಂದ್ರಪ್ಪ ಪಾಟೀಲ್ ಸೇರಿದಂತೆ ಅನೇಕರು ಇದ್ದರು.

ಭಾವೈಕ್ಯತೆಯ ಪುಣ್ಯ ಭೂಮಿ ಇದಾಗಿದ್ದು, ಜಾತಿ, ಬೇಧ ಮರೆತು ಒಂದೇ ಕುಟುಂಬದಂತೆ ಬದುಕುತ್ತಿದ್ದೇವೆ. ಮಹಾದಾಸೋಹಿ ಶರಣಬಸವೇಶ್ವರ ಮಾರ್ಗದಲ್ಲಿ ಪ್ರತಿಯೊಬ್ಬರು ಸಾಗುವ ಮೂಲಕ ಪ್ರೇರಣೆಯಾಗಿ ಬಾಳುತ್ತಿದ್ದೇವೆ.  -ರಾಜಶೇಖರ ಪಾಟೀಲ್ ತೇಗಲತಿಪ್ಪಿ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here