ಬಸವೇಶ್ವರ ಸಹಕಾರ ಸಂಘದ ಚುನಾವಣೆ: ಮತ್ತಿಬ್ಬರು ಕಣದಿಂದ ಹೊರಕ್ಕೆ

0
41

ಸುರಪುರ: ನಗರದ ಬಸವೇಶ್ವರ ಪತ್ತಿನ ಸಹಕಾರ ಸಂಘಕ್ಕೆ ಇದೇ ಫೆಬ್ರವರಿ ೧೪ ರಂದು ಚುನಾವಣೆ ನಡೆಯಲಿದ್ದು,ಒಟ್ಟು ೫೯ ಜನ ಸ್ಪರ್ಧಿಗಳು ಕಣದಲ್ಲಿದ್ದಾರೆ.ಚುನಾವಣೆ ಹತ್ತಿರವಿರುವ ಸಂದರ್ಭದಲ್ಲೆ ೫೯ ಜನ ಸ್ಪರ್ಧಿಗಳಲ್ಲಿ ಸೋಮವಾರ ೨೧ ಜನ ಅಭ್ಯಾರ್ಥಿಗಳು ವಿವಿಧ ಕಾರಣಗಳಿಂದ ಚುನಾವಣಾ ಕಣದಿಂದ ಹಿಂದೆ ಸರಿದು ನಿವೃತ್ತಿ ಘೋಷಿಸಿದ್ದರು.ಅದರ ಮುಂದುವರೆದ ಭಾಗವಾಗಿ ಇಂದು (ಮಂಗಳವಾರ) ಮತ್ತಿಬ್ಬರು ಅಭ್ಯಾರ್ಥಿಗಳು ಚುನಾವಣಾ ಕಣದಿಂದ ಹಿಂದೆ ಸರಿದಿದ್ದು ಒಟ್ಟು ೨೩ ಜನ ಅಭ್ಯಾರ್ಥಿಗಳು ಈಬಾರಿಯ ಚುನಾವಣೆಯಿಂದ ನಿವೃತ್ತಿ ಘೋಷಿಸಿದಂತಾಗಿದೆ.

ಇಂದು ನಡೆದ ಬೆಳವಣಿಗೆಗಳಲ್ಲಿ ಸಂಘದ ಹಾಲಿ ಅಧ್ಯಕ್ಷರಾಗಿರುವ ಸುರೇಶ ಸಜ್ಜನವರ ಪ್ರತಿಸ್ಪರ್ಧಿಗಳಾಗಿದ್ದ ನೀಲಮ್ಮಾ ರಾಜಶೇಖರ ಅವರು ಚುನಾವಣಾ ಕಣದಿಂದ ನಿವೃತ್ತಿ ಘೋಷಿಸಿದ್ದು ಸಮಾಜದ ಹಿತದೃಷ್ಟಿಯಿಂದಾಗಿ ಕಣದಿಂದ ಹಿಂದೆ ಸರಿದಿರುವುದಾಗಿ ಘೋಷಿಸಿದ್ದಾರೆ.ಅದರಂತೆ ಮತ್ತೊಬ್ಬ ಸಾಮಾನ್ಯ ಅಭ್ಯಾರ್ಥಿಯಾಗಿ ಸ್ಪರ್ಧಿಸಿದ್ದ ರಾಜಶೇಖರ ಎಸ್.ಕುಂಬಾರ ಕೂಡ ಚುನಾವಣೆಯಿಂದ ಹಿಂದೆ ಸರಿದಿದ್ದು,ಸುರೇಶ ಸಜ್ಜನ್ ಪ್ಯಾನಲ್‌ಗೆ ಬೆಂಬಲಿಸುವುದಾಗಿ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here