ಸವಲತ್ತುಗಳನ್ನು ಸದೂಪಯೋಗ ಪಡೆಸಿಕೊಳ್ಳಿ: ರಾಜುಗೌಡ

0
73

ಸುರಪುರ: ವಿದ್ಯಾರ್ಥಿಗಳು ನಿಮ್ಮ ಒದಿಗಾಗಿ ಸಾಕಷ್ಟು ಸವಲತ್ತುಗಳನ್ನು ಸರ್ಕಾರವು ಮತ್ತು ನಿಮ್ಮ ಪೋಷಕರು ವದಗಿಸುತ್ತಿದ್ದಾರೆ ಅವಗಳನ್ನು ಸದೂಪಯೋಗಿಸಿಕೊಂಡು ಉನ್ನತ್ತ ಫಲಿತಾಂಶದಿಂದ ತೇರ್ಗೆಡೆಹೊಂದುವತ್ತ ನಿಮ್ಮ ದಿನಚರಿಗಳನ್ನು ರೊಪಿಸಿಕೊಂಡು ಕಾಲೇಜಿಗೆ ಕಿರ್ತಿ ತರಬೇಕು ಎಂದು ಶಾಸಕ ನರಸಿಂಹ ನಾಯಕ (ರಾಜುಗೌಡ) ತಿಳಿಸಿದರು.

ನಗರದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಸಭಾಗಂಣದಲ್ಲಿ ವಿದ್ಯಾರ್ಥಿಗಳಿಗೆ ಸಾಂಕೇತಿಕವಾಗಿ ಲ್ಯಾಪಟಾಪ್ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ನಿಮಗೆ ಲ್ಯಾಪ್ಟಾಪ್ ವಿತರಿಸುವುದು ನಿಮ್ಮ ಅಭ್ಯಾಸಕ್ಕೆ ಸಹಾಯವಾಗಲೆಂದು ಇದನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡು ಅಬ್ಯಾಸಮಾಡಬೇಕು ಮತ್ತು ಇದರಿಂದ ವಿದ್ಯಾರ್ಥಿಗಳು ವಾಮಮಾರ್ಗಹಿಡಿದು ದಾರಿತಪ್ಪುವುದು ಬೇಡ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

Contact Your\'s Advertisement; 9902492681

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಪ್ರಾಚಾರ್ಯ ವೆಂಕೋಬ ಬಿರಾದರ್ ಮಾತನಾಡಿ ವಿದ್ಯಾರ್ಥಿಗಳು ನಿಮಗೆ ಸಿಗುವ ಸವಲತ್ತುಗಳನ್ನು ಸದೂಪಯೋಗ ಪಡಿಸಿಕೊಳ್ಳಬೇಕು ಮುಖ್ಯಮಂತ್ರಿಗಳ ಉಚಿತಲ್ಯಾಪಟಾಪ್ ವಿತರಣೆ ಯೋಜನೆಯನ್ನು ಈ ಬಾರಿ ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ವಿಸ್ತರಿಸಲಾಗಿದೆ ಒಟ್ಟು ನಮ್ಮ ಕಾಲೇಜಿಗೆ ೨೧೦ ಲ್ಯಾಪಟಾಪ್‌ಗಳು ವಿತರಣೆಗೆ ಸಿದ್ದವಾಗಿವೆ ಸರ್ಕಾರದ ನಿಯಮದಂತೆ ಆಯಾ ವಿದ್ಯಾರ್ಥಿಗಳಿಗೆ ವಿತರಿಸಲಾಗುವುದು. ನಿಮಗೆ ಸಿಗುವ ಅವಕಾಶಗಳನ್ನು ಸದಬಳಕೆಮಾಡಿಕೊಂಡು ನಿಮ್ಮ ಕಾಲೇಜಿಗೆ ಕೀರ್ತಿತಂದು ನಿಮ್ಮ ತಂದೆ ತಾಯಿ ರುಣ ತೀರಸಬೇಕು ಎಂದು ಹೇಳಿದರು.

ಈ ಸಮಯದಲ್ಲಿ ಸಾಂಕೇತಿಕವಾಗಿ ೬ ವಿದ್ಯಾರ್ಥಿಗಳಿಗೆ ಲ್ಯಾಪಟಾಪ್‌ಗಳನ್ನು ವಿತರಿಸಲಾಯಿತು.
ಮುಖಂಡರಾದ ಸುರೇಶ ಸಜ್ಜನ್, ಹೆಚ್.ಸಿ.ಪಾಟೀಲ್, ಉಪನ್ಯಾಸಕರಾದ ಭೀಮಣ್ಣ ಮಾಲಿಪಾಟಿಲ್, ಎಸ್.ಎಸ್ ರಾಮಪುರೆ, ಬಲಭೀಮ ದೇಸಾಯಿ ಸೇರಿದಂತೆ ವಿದ್ಯಾರ್ಥಿಗಳು ಹಾಗೂ ಇನ್ನಿತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here