ಸರಕಾರದಿಂದ ಶ್ರೀ ರೇಣುಕಾಚಾರ್ಯ ಜಯಂತಿ ಆಚರಣೆಗೆ ಒತ್ತಾಯ

0
252

ಕಲಬುರಗಿ: ವೀರಶೈವ ಧರ್ಮ ಸ್ಥಾಪನಾಚಾರ್ಯ ಜಗದ್ಗುರು ಶ್ರೀ ರೇಣುಕಾಚಾರ್ಯ ಜಯಂತಿ ಸರಕಾರದಿಂದ ಆಚರಿಸಲು ಬಜೆಟ್‌ನಲ್ಲಿ ಘೋಷಿಸುವಂತೆ ಅಖಿಲ ಭಾರತ ವೀರಶೈವ ಮಹಾಸಭೆಯ ಕಾರ್ಯಕಾರಿ ಸಮಿತಿ ಸದಸ್ಯ ನಾಗಲಿಂಗಯ್ಯ ಮಠಪತಿ ಪತ್ರಿಕಾ ಹೇಳಿಕೆ ನೀಡಿ ಮನವಿ ಮಾಡಿದ್ದಾರೆ.

ಮೌಲ್ಯಗಳನ್ನು ಬೋಧಿಸಿ ಜನರಲ್ಲಿ ಧರ್ಮ ಪ್ರಜ್ಞೆಯೊಂದಿಗೆ ಧಾರ್ಮಿಕ ಆಚರಣೆಗಳನ್ನು ಸಾರಿದ ಜಗದ್ಗುರು ರೇಣುಕಾರ್ಚರಿಗೆ ನಾಡು ಸೇರಿದಂತೆ ದಕ್ಷಿಣ ಭಾರತಾದ್ಯಂತ ಜಾತಿ, ಮತ, ಪ್ರಾಂತ, ಪ್ರದೇಶವನ್ನು ಮೀರಿ ಲಕ್ಷಾಂತರ ಭಕ್ತ ಸಮೂಹವಿದ್ದು,  ಜಯಂತಿಯನ್ನು ಸರಕಾರದ ವತಿಯಿಂದ ಆಚರಣೆ ಮಾಡಬೇಕೆನ್ನುವುದು ಬಹುದಿನಗಳ ಬೇಡಿಕೆಯಾಗಿದೆ.

Contact Your\'s Advertisement; 9902492681

ಕುರಿತು ಮುಖ್ಯಮಂತ್ರಿಗಳು ಸಹ ಸಕಾರಾತ್ಮಕವಾಗಿ ಅನೇಕ ಧಾರ್ಮಿಕ ಸಭೆ, ಸಮಾರಂಭಗಳಲ್ಲಿ ವ್ಯಕ್ತಪಡಿಸಿದ್ದು ಅದೇ ರೀತಿಯಾಗಿ ಈ ಬಾರಿಯ ಬಜೇಟ್‌ನಲ್ಲಿ ಜಯಂತಿ ಘೋಷಣೆ ಮಾಡುವುದರ ಮೂಲಕ ಭಕ್ತ ಸಮೂಹದ ಬೇಡಿಕೆಯನ್ನು ಈಡೇರಿಸುವಂತೆ ಕೋರಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here