ದಿ.ವಿಠ್ಠಲ ಹೇರೂರ ಅವರ ಪಂಚಲೋಹದ ಮೂರ್ತಿಯ 25ರಂದು ಪೂರ್ವಭಾವಿ ಸಭೆ

0
427

ಕಲಬುರಗಿ: ಬಹುಜನ ನಾಯಕ ಹಾಗೂ ಮಾಜಿ ಸರಕಾರಿ ಮುಖ್ಯ ಸಚೇತಕರಾದ ದಿ. ವಿಠ್ಠಲ್ ಹೇರೂರವರ ದೇವಲಗಾಣಗಾಪೂರದ ಶಕ್ತಿ ಕೇಂದ್ರದಲ್ಲಿ ಭವ್ಯ ಪಂಚಲೋಹದ ಮೂರ್ತಿ ಅನಾವರಣಾ ಹಾಗೂ ನಿಜಶರಣ ಅಂಬಿಗರ ಚೌಡಯ್ಯನವರ ಮೂರ್ತಿ ಅನಾವರಣಾ ಮತ್ತು ವಿಠ್ಠಲ್ ಹೇರೂರ ಅವರು ಹುಟ್ಟುಹಾಕಿದ ಹೇರೂರ ಶಿಕ್ಷಣ ಸಂಸ್ಥೆಯ ೨೫ನೇ ರಜತಮಹೋತ್ಸವ ಕಾರ್ಯಕ್ರಮದ ಕುರಿತು ಮಂಗಳವಾರ ಫೇ.೨೫ರಂದು ಬೆಳ್ಳಿಗೆ 11 ಗಂಟೆಗೆ ನಗರದ ಕನ್ನಡ ಭವನದಲ್ಲಿ ಪೂರ್ವಭಾವಿ ಸಭೆ ಜರುಗಲಿದೆ.

ಆದ್ದರಿಂದ ಹೇರೂರ ಅಭಿಮಾನಿಗಳು ಕೋಲಿಸಮಾಜದ ಎಲ್ಲಾ ಮುಖಂಡರು, ಪಕ್ಷಗಳ ರಾಜಕೀಯ ಎಲ್ಲಾ ನಾಯಕರು, ಸಮಾಜದ ವಿವಿಧ ಸಂಘಟನೆಗಳ ಮುಖಂಡರು, ಫೆ.೨೫ರಂದು ನಡೆಯಲ್ಲಿರುವ ಪೂರ್ವ ಭಾವಿಸಭೆಯಲ್ಲಿ ಭಾಗವಹಿಸಿ ತಮ್ಮ ಅಮೂಲ್ಯ ಸಲಹೆ ಸೂಚನೆಗಳು ನೀಡಬೇಕೆಂದು ಸಂಸ್ಥೆ ಅಧ್ಯಕ್ಷ ಭಗವಂತಪ್ಪ ಹೇರೂರ ಹಾಗು ಕಾರ್ಯದರ್ಶಿ ಲಕ್ಷ್ಮಣ ಹೇರೂರ ಜಂಟಿಯಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here