ಗೋದುತಾಯಿ ಕಾಲೇಜಿನಲ್ಲಿ ಎನ್‌ಎಸ್‌ಎಸ್ ಶಿಬಿರ : ಸ್ವಯಂ ಸಿದ್ಧರಾಗಿ

0
37

ಕಲಬುರಗಿ : ಪ್ರತಿಯೊಂದು ಕೆಲಸಗಳನ್ನು ಸ್ವಯಂ ಮಾಡಿಕೊಳ್ಳುವುದು ಕಲಿಯಬೇಕು ಬೇರೆಯವರ ಮೇಲೆ ಅವಲಂಬನೆ ಆಗಬಾರದೆಂದು ಶರಣಬಸವೇಶ್ವರ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯರಾದ ಬಾಬುರಾವ ಚವ್ಹಾಣ ಹೇಳಿದರು.

ನಗರದ ಗೋದುತಾಯಿ ದೊಡ್ಡಪ್ಪ ಅಪ್ಪ ಕಲಾ ಮತ್ತು ವಾಣಿಜ್ಯ ಪದವಿ ಮಹಿಳಾ ಮಹಾವಿದ್ಯಾಲಯದಲ್ಲಿ ಭಾನುವಾರ ಎನ್‌ಎಸ್‌ಎಸ್ ಶಿಬಿರದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಾ, ವಿದ್ಯಾರ್ಥಿಗಳು ಪರಿಶ್ರಮ ಪಟ್ಟರೆ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಎನ್‌ಎಸ್‌ಎಸ್ ದಿಂದ ಶಿಸ್ತು, ಸಮಯಪ್ರಜ್ಞೆ, ಪ್ರತಿಭೆ ಹೊರಹಾಕುವುದು, ಮಾತನಾಡುವ ಕಲೆ, ವ್ಯಕ್ತಿತ್ವ ವಿಕಾಸ ಹೀಗೆ ಅನೇಕ ವಿಷಯಗಳು ನಿಮಗೆ ಕಲಿಯಲಿಕ್ಕೆ ಸಿಗುತ್ತವೆ. ಇಂದಿನ ಮಹಿಳೆಯರು ಯಾವುದರಲ್ಲಿ ಕಡಿಮೆ ಇಲ್ಲ. ಎಲ್ಲವನ್ನು ಸಾಧಿಸುತ್ತಿದ್ದಾಳೆ. ಆದರೆ ದೈಹಿಕವಾಗಿ ಇನ್ನೂ ಸದೃಢವಾಗುತ್ತಿಲ್ಲ. ಯೋಗ ಮಾಡಬೇಕು ಉತ್ತಮ ಆಹಾರ ಸೇವಿಸಬೇಕು. ಹಿರಿಯರು ಒಳ್ಳೆಯದನ್ನು ತಿಂದು ಪರಿಶ್ರಮದಿಂದ ಕೆಲಸ ಮಾಡಿ ಗಟ್ಟಿಮುಟ್ಟಾಗಿದ್ದರು. ಅದಕ್ಕಾಗಿ ನೀವು ಉತ್ತಮ ಆಹಾರಪದ್ಧತಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

Contact Your\'s Advertisement; 9902492681

ಇಂತಹ ಶಿಬಿರಗಳು ನಿಮಗೆ ಅನೇಕ ವಿಷಯಗಳನ್ನು ತಿಳಿಸಿಕೊಡುವುದಲ್ಲದೆ ಸಮಾಜದಲ್ಲಿ ಆದರ್ಶ ತತ್ವಗಳನ್ನು ತಿಳಿಸುತ್ತವೆ. ಹಿರಿಯರನ್ನು ಗೌರವದಿಂದ ಕಾಣಬೇಕು, ರಾಷ್ಟ್ರಪ್ರೇಮವನ್ನು ಬೆಳೆಸಿಕೊಳ್ಳಬೇಕು ಇದರ ಲಾಭವನ್ನು ಪಡೆಯಬೇಕು ಎಂದು ಹೇಳಿದರು. ಈ ಶಿಬಿರದ ಉದ್ದೇಶವೆನೆಂದರೆ ’ನನಗಾಗಿ ಅಲ್ಲ ನಿನಗಾಗಿ’ ಎಂದು ಹೇಳುತ್ತದೆ. ಎಂತಹದೆ ಕಷ್ಟದ ಸಮಯ ಬಂದರೂ ಧೃತಿಗೆಡದೆ ಅದನ್ನು ಎದುರಿಸುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ.ನೀಲಾಂಬಿಕಾ ಶೇರಿಕಾರ ಮಾತನಾಡಿ, ಒಂದು ವಾರ ನಡೆಯುವ ಈ ಶಿಬಿರದಲ್ಲಿ ಅನೇಕ ವಿದ್ವಾಂಸರು ಇದರಲ್ಲಿ ಭಾಗವಹಿಸಿ ಮಾತನಾಡುವವರಿದ್ದಾರೆ ಅದರ ಲಾಭವನ್ನು ವಿದ್ಯಾರ್ಥಿನಿಯರು ಪಡೆಯಬೇಕು. ಇಂತಹ ಶಿಬಿರಗಳು ಸ್ವಯಂಸೇವಕರನ್ನಾಗಿ ಮಾಡುತ್ತವೆ. ನಿಮ್ಮ ಬದುಕನ್ನು ರೂಪಿಸುತ್ತವೆ. ಹೊಸ ಹೊಸ ವಿಚಾರಗಳು ತಿಳಿಸಿಕೊಡುತ್ತದೆ. ಅದು ಬಿಟ್ಟು ಮೊಬೈಲ್ ಬಳಕೆಯಲ್ಲಿಯೇ ಹೆಚ್ಚು ಸಮಯವನ್ನು ವ್ಯರ್ಥ ಮಾಡಬೇಡಿ ಅದರಿಂದ ಲಾಭಕ್ಕಿಂಗ ನಷ್ಟವೇ ಹೆಚ್ಚು ಎಂದು ಹೇಳಿದರು. ಮಹಾವಿದ್ಯಾಲಯದ ಎನ್‌ಎಸ್‌ಎಸ್ ಕಾರ್ಯಕ್ರಮದ ಅಧಿಕಾರಿಗಳಾದ ಶ್ರೀಮತಿ ಜಾನಕಿ ಹೊಸೂರ್ ಮತ್ತು ಶ್ರೀಮತಿ ಪ್ರಭಾವತಿ ಎಚ್. ವೇದಿಕೆಯಲ್ಲಿದ್ದರು.

ಕು.ಅಪೂರ್ವ ಸ್ವಾಗತಿಸಿದರು, ಕು. ಪೂಜಾ ಡೊಮನಾಳ ನಿರೂಪಿಸಿದರು. ಕು. ಪ್ರಿಯಾಂಕಾ ಗಾಜರೆ ವಂದಿಸಿದರು.
ಕಾರ್ಯಕ್ರಮದಲ್ಲಿ ಡಾ.ಸಿದ್ದಮ್ಮ ಗುಡೇದ, ಡಾ.ಇಂದಿರಾ ಶೇಟಕಾರ, ಶ್ರೀಮತಿ ಸಾವಿತ್ರಿ ಜಂಬಲದಿನ್ನಿ, ಡಾ.ಎನ್.ಎಸ್.ಹೂಗಾರ, ಡಾ.ಸೀಮಾ ಪಾಟೀಲ, ರೇವಯ್ಯ ವಸ್ತ್ರದಮಠ, ಕೃಪಾಸಾಗರ ಗೊಬ್ಬುರ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

ಗೋದುತಾಯಿ ದೊಡ್ಡಪ್ಪ ಅಪ್ಪ ಕಲಾ ಮತ್ತು ವಾಣಿಜ್ಯ ಪದವಿ ಮಹಿಳಾ ಮಹಾವಿದ್ಯಾಲಯದಲ್ಲಿ ಸೋಮವಾರ ಎನ್‌ಎಸ್‌ಎಸ್ ಶಿಬಿರದಲ್ಲಿ ಈಶ ಫೌಂಡೇಶನ ಪ್ರಮೋದ ಮತ್ತು ಶ್ರೀಮತಿ ಅನಿ ಯವರು ಯೋಗ ಹೇಳಿದರು. ಡಾ. ಶಾಂತಲಾ ನಿಷ್ಠಿ, ಡಾ. ಇಂದಿರಾ ಶೇಟಕಾರ ಎನ್‌ಎಸ್‌ಎಸ್ ಅಧಿಕಾರಿಗಳಾದ ಶ್ರೀಮತಿ ಜಾನಕಿ ಹೊಸೂರ್ ಮತ್ತು ಶ್ರೀಮತಿ ಪ್ರಭಾವತಿ ಎಚ್. ಮತ್ತು ವಿದ್ಯಾರ್ಥಿನಿಯರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here