ಸರ್ವಜ್ಞ ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆಗೆ ವಿಧಾನ ಸಭೆ ಸಮ್ಮತಿ: ಕುಂಬಾರ ಸಮಾಜ ಸಂತಸ

0
144

ಕಲಬುರಗಿ: ಸರ್ವಜ್ಞ ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆಗೆ ವಿಧಾನಸಭೆ ಸಮ್ಮತಿ ನೀಡಿರುವುದು ಕುಂಬಾರ ಸಮುದಾಯಕ್ಕೆ ಸಂತಸವಾಗಿದೆ ಎಂದು ರಾಜ್ಯ ಕುಂಬಾರರ ಯುವ ಸೈನ್ಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಜಗದೇವ ಎಸ್ ಕುಂಬಾರ ತಿಳಿಸಿದ್ದಾರೆ.

ಮಾರ್ಚ್ 02 ಸೋಮವಾರ ದಂದು ಸದನದಲ್ಲಿ ಸರ್ವಜ್ಞನ ಜನ್ಮಸ್ಥಳವಾದ ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲ್ಲೂಕಿನ ಮಾಸೂರು ಅಬಲೂರು ಅಭಿವೃದ್ಧಿಯ ಸಲುವಾಗಿ ಸಮಾಜದ ಹಿರಿಯರು ಸಂಘ-ಸಂಸ್ಥೆಗಳ ನಾಯಕರ ಹೋರಾಟದ ಪ್ರತಿಫಲವಾಗಿ ಸರ್ವಜ್ಞ ಕ್ಷೇತ್ರದ ಅಭಿವೃದ್ಧಿ ಮತ್ತು ನಿರ್ವಹಣೆಗೆ ಪ್ರಾಧಿಕಾರ ಸ್ಥಾಪಿಸಲು ವಿಧಾನಸಭೆ ಅನುಮೋದನೆ ನೀಡಿದೆ.

Contact Your\'s Advertisement; 9902492681

ಆಡಳಿತ ಪಕ್ಷದ ಮುಖ್ಯಮಂತ್ರಿ ಬಿ,ಎಸ್, ಯಡಿಯೂರಪ್ಪ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಎಲ್ಲಾ ಸಚಿವರಿಗೂ ಶಾಸಕರಿಗೂ ಕುಂಬಾರ ಸಮಾಜದ ಪರವಾಗಿ ಪತ್ರಿಕಾ ಪ್ರಕಟಣೆ ಮೂಲಕ ಎಲ್ಲರಿಗೂ ಅಭಿನಂದನೆಗಳು ಸಲ್ಲಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here