ಸಿಯುಕೆಯಲ್ಲಿ ಮೂರು ದಿನಗಳ ನಿರ್ವಹಣಾ ಫೆಸ್ಟ್ ಅಕ್ಯುಥಾ

0
71

ಕಲಬುರಗಿ: ಮ್ಯಾನೇಜ್ಮೆಂಟ್ ಫೆಸ್ಟ್ ವಿದ್ಯಾರ್ಥಿಗಳಿಗೆ ತಮ್ಮ ಜ್ಞಾನವನ್ನು ಪ್ರದರ್ಶಿಸಲು ಮತ್ತು ಪ್ರಾಯೋಗಿಕವಾಗಿ ವಿಷಯಗಳನ್ನು ಕಲಿಯಲು ವೇದಿಕೆಯನ್ನು ನೀಡುತ್ತದೆ ಎಂದು ಕುಲಪತಿಗಳಾದ ಪ್ರೊ.ಎಚ್.ಎಂ.ಮಹೇಶ್ವರಯ್ಯ ಹೇಳಿದರು.

ಸಿಯುಕೆಯ ವ್ಯವಹಾರ ಅಧ್ಯಯನ ವಿಭಾಗ ಆಯೋಜಿಸಿದ್ದ ಮೂರು ದಿನಗಳ ಮ್ಯಾನೇಜ್‌ಮೆಂಟ್ ಫೆಸ್ಟ್ ಅಕ್ಯುಥಾ (ಜ್ಞಾನದ ಪಯಣ) ಉದ್ಘಾಟನೆಯ ನಂತರ ಅವರು ಮಾತನಾಡಿದರು. ಅವರು ವಿದ್ಯಾರ್ಥಿಗಳಿಗೆ ಉದ್ಯೋಗಾಕಾಂಕ್ಷಿಗಳಿಗಿಂತ ಉದ್ಯೋಗ ನೀಡುವವರಾಗಲು ಪ್ರಯತ್ನಿಸಿ ಎಂದು ಸಲಹೆ ನೀಡಿದರು.

Contact Your\'s Advertisement; 9902492681

ಈ ರೀತಿಯ ನಿರ್ವಹಣಾ ಉತ್ಸವವು ನಿಮ್ಮಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ ಮತ್ತು ನಿಮ್ಮ ವ್ಯಕ್ತಿತ್ವವನ್ನು ಬೆಳೆಸಲು ಸಹಾಯ ಮಾಡುತ್ತದೆ ಎಂದು ಹೇಳಿದರು.

ಕಲಬುರಗಿಯ ಕೆಎಂಎಫ್‌ನ ಅಧ್ಯಕ್ಷರಾದ ಆರ್.ಕೆ.ಪಾಟೀಲ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ. ಗ್ರಾಮೀಣ ಪ್ರದೇಶದಲ್ಲಿ ಸಾಕಷ್ಟು ಉದ್ಯಮಶೀಲ ಅವಕಾಶಗಳಿವೆ, ನಾವು ಜನರ ಅಗತ್ಯಗಳನ್ನು ಗುರುತಿಸಿ ಅದರ ಮೇಲೆ ಕೆಲಸ ಮಾಡಬೇಕಾಗಿದೆ. ಗ್ರಾಮೀಣ ವಿದ್ಯಾರ್ಥಿಗಳಿಗೆ ಕೈಗೆಟುಕುವ ಬೆಲೆಯಲ್ಲಿ ಗುಣಮಟ್ಟದ ಶಿಕ್ಷಣವನ್ನು ನೀಡಲು ನಾನು ಗ್ರಾಮೀಣ ಪ್ರದೇಶದಲ್ಲಿ ಇಂಗ್ಲಿಷ್ ಮಾಧ್ಯಮ ಶಾಲೆಯನ್ನು ಪ್ರಾರಂಭಿಸಿದ್ದೇನೆ ಮತ್ತು ರೈತರು, ಸಣ್ಣ ವ್ಯಾಪಾರಿಗಳು ಮತ್ತು ಮಹಿಳೆಯರಿಗೆ ಸಹಾಯ ಮಾಡಲು ಸೌಹಾರ್ದ ಕೋಆಪರೇಟಿವ್ ಸೊಸೈಟಿಯನ್ನು ಪ್ರಾರಂಭಿಸಿದ್ದೆನೆ. ಇದು ಗ್ರಾಮೀಣ ಜನರಿಗೆ ಸಾಕಷ್ಟು ಸಹಾಯವಾಗಿದೆ.

ವ್ಯವಹಾರ ಅಧ್ಯಯನ ವಿಭಾಗದ ಮುಖ್ಯಸ್ಥ ಪ್ರೊ.ಎಂ.ವಿ.ಅಲಗವಾಡಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ ಅಕ್ಯುಥಾವನ್ನು ನಮ್ಮ ಎರಡನೇ ಬ್ಯಾಚ್ ವಿದ್ಯಾರ್ಥಿಗಳಿಂದ ೨೦೧೩ರಲ್ಲಿ ಪ್ರಾರಂಭಿಸಲಾಯಿತು ಮತ್ತು ಈಗ ನಾವು ನಾಲ್ಕು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜಿಸಿದ್ದೇವೆ ಮತ್ತುಇದು ಅಕ್ಯುಥಾ ದ ಐದನೆ ಆವೃತ್ತಿಯಾಗಿದೆ ಮತ್ತು ಇದು ವರ್ಷದಿಂದ ವರ್ಷಕ್ಕೆ ಬೆಳೆಯುತ್ತಿದೆ. ಈ ಬಾರಿ ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಬೆಳಗಾವಿ, ಜಿಲ್ಲೆಗಳಿಂದ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ. ಇದು ವಿದ್ಯಾರ್ಥಿಗಳಿಂದ, ವಿದ್ಯಾರ್ಥಿಗಳಿಗಾಗಿ ಮತ್ತು ವಿದ್ಯಾರ್ಥಿಗಳೆ ನಡೆಸುವ ಕಾರ‍್ಯಕ್ರಮವಾಗಿದೆ. ಅಧ್ಯಾಪಕರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾತ್ರ ನೀಡುತ್ತಾರೆ. ಎಲ್ಲವನ್ನೂ ವಿದ್ಯಾರ್ಥಿಗಳಿಮದ ಮಾಡಲಾಗುತ್ತದೆ. ಈ ಕಾರ‍್ಯಕ್ರಮವು ವಿದ್ಯಾರ್ಥಿಗಳಿಗೆ ನಿರ್ವಹಣಾ ಪಾಠಗಳನ್ನು ಪ್ರಾಯೋಗಿಕವಾಗಿ ಕಲಿಯಲು ಸಹಾಯ ಮಾಡುತ್ತದೆ ಮತ್ತು ನಿಜ ಜೀವನದ ವ್ಯವಹಾರ ಸಂದರ್ಭಗಳನ್ನು ಎದುರಿಸಲು ಅವರನ್ನು ಸಿದ್ಧಗೊಳಿಸುತ್ತದೆ. ಅದಕ್ಕಾಗಿ ಸಂಭವ (ನವೋದ್ಯಾಮ) ಸಹಸ್ರತ್ (ವ್ಯವಹಾರ ರಸಪ್ರಶ್ನೆ), ಸೇವಾನ್ (ಹಣಕಾಸು ಸ್ಪರ್ದೆ ಸೌಜಸ್ (ಮಾರ್ಕೆಟಿಂಗ ಸ್ಪರ್ದೆ), ಸನ್ನಿದ (ಟ್ರೆಷರ್ ಹಂಟ್), ಸಮೇಕ್ಷಾ (ಮಾನವ ಸಂಪನ್ಮೂಲ ಸ್ಪರ್ದೆ) ಸರಮೈ (ಕಸದಿಂದ ರಸ), ಸಾಧಿಲ್ (ಅತ್ಯುತ್ತಮ ವ್ಯವಸ್ಥಾಪಕ), ಸಬ್ರಂಗ್ (ಛಾಯಾಗ್ರಾಫಿ) ಹಾಡುಗಾರಿಕೆ ಮತ್ತು ನೃತ್ಯ ಸ್ಪರ್ಧೆಗಳನ್ನು ಏರ್ಪಡಿಸಲಾಗುತ್ತಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಪ್ರೊ.ರಾಜೇಶ್ವರಿ ಮಹೇಶ್ವರಯ್ಯ, ಪರೀಕ್ಷೆಯ ನಿಯಂತ್ರಕ ಪ್ರೊ.ಬಿ.ಆರ್. ಕೆರೂರ್, ಹಣಕಾಸು, ಅಧಿಕಾರಿ, ಶಿವಾನಂದಮ್, ಪ್ರೊ. ಪುಷ್ಪಾ ಎಂ. ಸವದತ್ತಿ, ಡೀನ್ ಮತ್ತು ಮುಖ್ಯಸ್ಥರು, ಅಧ್ಯಾಪಕ ಸದಸ್ಯರು, ವಿದ್ಯಾರ್ಥಿಗಳು ಮತ್ತು ಭಾಗವಹಿಸುವವರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here