ಕೊಲೆಗಾರರ ಪತ್ತೆ ಹಚ್ಚಲು ಜಯಕರ್ನಾಟಕ ಆಗ್ರಹ

0
279

ಸುರಪುರ: ಇತ್ತೀಚೆಗೆ ಮಹಿಳೆಯರ ಮೇಲಿನ ಅತ್ಯಾಚಾರ ಮತ್ತು ಕೊಲೆಗಳು ಹೆಚ್ಚುತ್ತಿರುವುದು ಆತಂಕದ ಸಂಗತಿಯಾಗಿದೆ.ಇಂತಹ ಹೀನ ಕೃತ್ಯಗಳಿಂದ ಮಾನವ ಸಮಾಜ ತಲೆ ತಗ್ಗಿಸುವಂತಾಗುತ್ತಿದೆ.

ಕಳೆದ ಅಕ್ಟೋಬರ್ ತಿಂಗಳ ೧೭ನೇ ತಾರೀಖಿನಂದು ತಾಲೂಕಿನ ಹೆಗ್ಗಣದೊಡ್ಡಿ ಬಳಿಯ ನಿರ್ಜನ ಪ್ರದೇಶದಲ್ಲಿ ಮಂಗಳಮುಖಿ ಸಲ್ಮಾ (ಸಲೀಂ) ಎಂಬುವವರ ಮೇಲೆಯು ಹಲ್ಲೆ ನಡೆಸಿ ಕೊಲೆ ಮಾಡಲಾಗಿತ್ತು.ಈಗ ನಗರದಲ್ಲಿಯೇ ಮತ್ತೊಂದು ಅಂತಹದ್ದೆ ಘಟನೆ ನಡೆಸಿ ಅಮಾನುಷವಾಗಿ ಮಹಿಳೆಯ ಬರ್ಬರ ಕೊಲೆ ನಡೆದಿರುವುದು ಆತಂಕದ ವಿಷಯವಾಗಿದೆ.

Contact Your\'s Advertisement; 9902492681

ಕೊಲೆ ಮಾಡಿರುವ ಕೊಲೆಗಾರರನ್ನು ಪೊಲೀಸ್ ಅಧಿಕಾರಿಗಳು ಶೀಘ್ರವೆ ಬಂಧಿಸಿ ಉಗ್ರ ಶಿಕ್ಷೆಗೆ ಒಳಪಡಿಸಬೇಕೆಂದು ಜಯ ಕರ್ನಾಟಕ ಸಂಘಟನೆ ಪೊಲೀಸ್ ಇಲಾಖೆಯಲ್ಲಿ ಮನವಿ ಮಾಡುತ್ತದೆ ಎಂದು ಸಂಘದ ತಾಲೂಕು ಅಧ್ಯಕ್ಷ ರವಿ ನಾಯಕ ಬೈರಿಮಡ್ಡಿ ಪತ್ರಿಕಾ ಹೇಳಿಕೆ ಮೂಲಕ ಆಗ್ರಹಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here