ಸುರಪುರ ನಗರ ಪೊಲೀಸ್ ಲಾಠಿಗೆ ಲಾಕ್ ಡೌನ್

0
70

ಸುರಪುರ: ಸರ್ಕಾರದ ಆದೇಶದ ಮೇರೆಗೆ ಸುರಪುರ ನಗರವು ಇಂದು ಭಾಗಶಹಾ ಲಾಕ್ ಡೌನ್ ಆಯಿತು. ನಗರದಲ್ಲಿ ದಿನ ನಿತ್ಯದ ದಿನಸಿ, ತರಕಾರಿ ಹಣ್ಣು, ಹಾಲಿನ ಅಂಗಡಿಗಳು ಮತ್ತು ಔಷಧಿ ಅಂಗಡಿಗಳನ್ನು ಹೊರತು ಪಡಿಸಿ ಇನ್ಯಾವ ಅಂಗಡಿ ಮುಂಗಟ್ಟುಗಳು ಸ್ವಯಂಪ್ರೇರಣೆಯಿಂದ ಬಂದಾಗಿದ್ದವು.

ಯುಗಾದಿ ಹಬ್ಬದ ಅಂಗವಾಗಿ ಬೆಳ್ಳಿಗ್ಗೆ ತರಕಾರಿ ಮಾರುಕಟ್ಟೆಯಲ್ಲಿ ತರಕಾರಿಗಳನ್ನು ಖರೀದಿಸಿಲು ಜನರು ಮುಗಿಬಿದ್ದಿದ್ದರು.ಜನರನ್ನು ಕಳುಹಿಸಲು ನಗರಸಭೆಯ ಸಿಬ್ಬಂದಿ ತಮ್ಮ ವಾಹನಗಳಲ್ಲಿ ಧ್ವನಿವರ್ಧಕದ ಮೂಲಕ ಜನರು ಹೋದಲು ವಿನಂತಿಸಿದರಾದರು ಕ್ಯಾರೆ ಎನ್ನಲಿಲ್ಲ.ಇದನ್ನು ಅರಿತ ಪೊಲೀಸರು ಡಿವಾಯ್‌ಎಸ್‌ಪಿ ವೆಂಕಟೇಶ ಹುಗಿಬಂಡಿ ನೇತೃತ್ವದಲ್ಲಿ ಪಿಐ ಎಸ್.ಎಮ್.ಪಾಟೀಲರು ತಮ್ಮ ಸಿಬ್ಬಂದಿಯೊಂದಿಗೆ ತರಕಾರಿ ಮಾರುಕಟ್ಟೆಗೆ ಆಗಮಿಸಿದರು.ಸ್ವತಃ ಲಾಠಿ ಹಿಡಿದು ರಸ್ತೆಗಿಳಿದ ಡಿವಾಯ್‌ಎಸ್‌ಪಿ ಹಾಗು ಪಿಐ ಅವರು ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿದ್ದಕ್ಕೆ ಲಾಠಿ ತೋರಿಸಿ ಬೆದರಿಸುವ ಮೂಲಕ ಜನರನ್ನು ಚದುರಿಸಿದರು.ಅಲ್ಲದೆ ತರಕಾರಿ ಅಂಗಡಿಯಿಂದ ಒಂದು ಅಂಗಡಿಯಿಂದ ಇನ್ನೊಂದು ಅಂಗಡಿ ೫೦ ಅಡಿ ಅಂತರದಲ್ಲಿ ಕೂಡಿಸಿ ವ್ಯಾಪಾರ ನಡೆಸುವಂತೆ ಅನುಕೂಲ ಮಾಡಿಕೊಟ್ಟರು.ಆದರೂ ಮದ್ಹ್ಯಾನದ ವೇಳೆಗೆ ಇಡೀ ನಗರ ಸಂಪೂರ್ಣ ಲಾಕ್‌ಡೌನ್ ಆಗಿತ್ತು.

Contact Your\'s Advertisement; 9902492681

ನಗರದ ಎಲ್ಲಾ ಪ್ರಮುಖ ರಸ್ತೆಗಳು ಮತ್ತು ವೃತ್ತಗಳು ಹಾಗು ಮಾರುಕಟ್ಟೆ ಜನರಿಲ್ಲದೆ ಬಿಕೋ ಎನ್ನುತ್ತಿದ್ದವು.ಅಲ್ಲದೆ ನಗರಕ್ಕೆ ಸಂಪರ್ಕ ಕಲ್ಪಿಸುವ ಎಲ್ಲಾ ದ್ವಾರಗಳಲ್ಲಿ ಪೊಲೀಸರು ನಿಂತು ಅವಶ್ಯಕತೆಯಿಂದ ಬರುವವರಿಗೆ ಮಾತ್ರ ನಗರಕ್ಕೆ ಬರಲು ಅವಕಾಶ ಮಾಡಿಕೊಟ್ಟರು.ಅಲ್ಲದೆ ಜಿ.ಪಂ ಮಾಜಿ ಅಧ್ಯಕ್ಷರಾದ ರಾಜಾ ಹನಮಪ್ಪ ನಾಯಕ (ತಾತಾ) ನೇತೃತ್ವದಲ್ಲಿ ಬಿಜೆಪಿಯ ಅನೇಕ ಮುಖಂಡರು ನಗರದೆಲ್ಲೆಡೆ ಸಂಚರಿಸಿ ಕೊರೊನಾ ಕುರಿತು ಮುಂಜಾಗ್ರತೆ ಮೂಡಿಸಿದರು ಅಲ್ಲದೆ ಜನರು ಲಾಕ್‌ಡೌನ್‌ಗೆ ಸಹಕರಿಸುವಂತೆ ಮನವಿ ಮಾಡಿದರು.ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ವೇಣು ಮಾಧವ ನಾಯಕ,ನರಸಿಂಹಕಾಂತ ಪಂಚಮಗಿರಿ,ವಿಷ್ಣು ಗುತ್ತೇದಾರ,ನಗರಸಭೆ ಪೌರಾಯುಕ್ತ ಜೀವನ ಕಟ್ಟಿಮನಿ, ಶಂಕರ ನಾಯಕ,ಭೀಮಣ್ಣ ಬೇವಿನಾಳ, ಗಫರ್ ಸಾಬ್ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here