ಉಪ್ಪಾರ ಸಮುದಾಯದಿಂದ ಮಹರ್ಷಿ ಭಗಿರಥ ಜಯಂತಿ ಆಚರಣೆ

0
128

ಸುರಪುರ: ನಗರದ ರಂಗಂಪೇಟೆಯಲ್ಲಿರುವ ಮಹರ್ಷಿ ಭಗಿರಥ ವೃತ್ತದಲ್ಲಿ ತಾಲ್ಲೂಕಿನ ಉಪ್ಪಾರ ಸಮುದಾಯದಿಂದ ಭಗಿರಥ ಜಯಂತಿ ಆಚರಿಸಲಾಯಿತು.ಬೆಳಿಗ್ಗೆ ಒಂಬತ್ತು ಗಂಟೆಗೆ ಭಗಿರಥ ವೃತ್ತದಲ್ಲಿ ಸೇರಿದ ಅನೇಕರು ಮಹರ್ಷಿ ಭಗಿರಥರ ನಾಮಫಲಕಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿ ಸಿಹಿ ಹಂಚಿ ಪಟಾಕಿ ಸಿಡಿಸಿ ಜಯಘೋಷ ಕೂಗಿದರು.

ಈ ಸಂದರ್ಭದಲ್ಲಿ ಉಪ್ಪಾರ ಸಮುದಾಯದ ರಾಜ್ಯ ಉಪಾಧ್ಯಕ್ಷ ಅಮರೇಶ ಯಡಹಳ್ಳಿ ಮಾತನಾಡಿ,ನಮ್ಮ ಉಪ್ಪಾರ ಸಮುದಾಯದ ಉಧ್ದಾರಕ ಮಹರ್ಷಿ ಭಗಿರಥರು.ಇವರು ಮಹನ್ ತಪಸ್ವಿಗಳಾಗಿದ್ದರು,ತಮ್ಮ ತಪಸ್ಸಿನಿಂದ ಗಂಗೆಯನ್ನು ಧರೆಗೆ ತಂದು ನಮ್ಮೆಲ್ಲರ ಉಧ್ದರಿಸಿದ ಮಹಾತ್ಮರಾಗಿದ್ದಾರೆ.ಇಂತಹ ಪುಣ್ಯ ಪುರುಷ ನಮ್ಮ ಉಪ್ಪಾರ ಸಮುದಾಯದ ಮಹನಿಯರು ಎಂಬುದು ನಮ್ಮೆಲ್ಲರಿಗೆ ಹೆಮ್ಮೆಯ ಸಂಗತಿಯಾಗಿದೆ.ನಮ್ಮ ಸಮುದಾಯದ ಪುಣ್ಯ ಪುರುಷನ ಜಯಂತಿಯನ್ನು ನಾವೆಲ್ಲರು ಅಧ್ದೂರಿಯಾಗಿ ಆಚರಿಸುವ ಮೂಲಕ ಅವರನ್ನು ಸ್ಮರಿಸೋಣ ಎಂದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಸಮುದಾಯ ತಾಲ್ಲೂಕು ಅಧ್ಯಕ್ಷ ಭೀಮಣ್ಣ ಚಿಕ್ಕನಹಳ್ಳಿ, ರಾಮಚಂದ್ರ ದೇವಿಕೇರಾ, ಡಾ: ಮುಕುಂದ ಯಾನಗುಂಟಿ, ಶಂಕರ ಸಾಹು ಹಸನಾಪುರ, ದೇವಿಂದ್ರಪ್ಪ ಸಾಹು ವಾಗಣಗೇರಾ, ಗಂಗಾಧರ ಲಕ್ಷ್ಮೀಪುರ, ಜಗದೀಶ ನಂಬಾ, ವೆಮಕಟೇಶ ಗದ್ವಾಲ, ಗೋವಿಂದರಾಜ ಶಹಾಪುರಕರ್, ಮಂಜುನಾಥ ಧರಣಿ, ಮಾನಪ್ಪ ದೇವರಗೋನಾಲ, ಬಸವರಾಜ ರುಕ್ಮಾಪುರ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here