ಕೊರೋನಾ ವೈರಸ್ ಭೀತಿ: ಊರಿನ ಮುಖ್ಯ ರಸ್ತೆ ಬಂದ್ ಮಾಡಿಕೊಂಡ ಗ್ರಾಮಸ್ಥರು

0
219

ಕಲಬುರಗಿ, ಚಿತ್ತಾಪುರ: ಕೊರೋನಾ ವೈರಸ್ ಇಡೀ ವಿಶ್ವವನ್ನೇ ಕಾಡುತ್ತಿರುವ ಕೋವಿಡ್-19 ಸೋಂಕು ತಡೆಗೆ ಕೇಂದ್ರ, ರಾಜ್ಯ ಸರಕಾರ 21 ದಿನ ಲಾಕ್ ಡೌನ್ ಘೋಷಣೆ ಮಾಡಿದ್ದು, ಜಿಲ್ಲಾಡಳಿತದಿಂದ ಜನರು ಯಾರು ಹೊರಗಡೆ ಬರದಂತೆ ನಿಷೇದಾಜ್ಞೆ ಜಾರಿ ಇರುವ ಹಿನ್ನೆಲೆ ತಾಲೂಕಿನಿಂದ 23 ಕಿಲೋ ಮೀಟರ್ ದೂರದ ಸಂಕನೂರು ಗ್ರಾಮದ ಗ್ರಾಮಸ್ಥರು ಗ್ರಾಮದ ಮುಖ್ಯರಸ್ತೆ ಸ್ವಇಚ್ಛೆಯಿಂದ ಬಂದ್ ಮಾಡಿರುವುದ ಬೆಳಕಿಗೆ ಬಂದಿದೆ.

ಎಲ್ಲರೂ ಆರೋಗ್ಯವಾಗಿ ಇರಲು ಮುನ್ನೆಚ್ಚರಿಕೆ ಕ್ರಮ ವಹಿಸಿಕೊಳ್ಳಬೇಕಾಗಿದ್ದು ಹೀಗಾಗಿ ಗ್ರಾಮದವರು ಬೇರೆ ಊರಿಗೆ ಹೋಗಬಾರದು, ಬೇರೆ ಊರಿನವರು ಗ್ರಾಮಕ್ಕೆ ಬರಬಾರದು ಎಂದು ಮುಖ್ಯರಸ್ತೆಯ ನಡುವೆ ಜೆಸಿಪಿಯಿಂದ ಕಲ್ಲಿನ ಬಂಡೆಗಳು ಮತ್ತು ಮಣ್ಣು ಹಾಕಿ ಬಂದ್ ಮಾಡಲಾಗಿದೆ. ಪ್ರತಿಯೊಬ್ಬರು ಸರ್ಕಾರದ ನಿಯಮಗಳನ್ನು ಚಾಚೂ ತಪ್ಪದೇ ಪಾಲಿಸಬೇಕೆಂಬುದು ಗ್ರಾಮಸ್ಥರ ಮಾತಾಗಿದೆ.

Contact Your\'s Advertisement; 9902492681

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ಸಾಬಣ್ಣ, ದೇವಪ್ಪ ಅಲ್ಲೂರ್ ಗ್ರಾಮ ಪಂಚಾಯತ್ ಸದಸ್ಯರು, ಬಸವರಾಜ್, ಲಕ್ಕಪ್ಪ, ಹನುಮಂತ ಆರ್ ಡಿ, ಶರಣಪ್ಪ, ಅಯ್ಯಪ್ಪ, ನಿರಂಜನಪ್ಪ, ನಾಗಪ್ಪ ಅಲ್ಲೂರು, ಸೇರಿದಂತೆ ಮುಂತಾದವರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here