ಬೆಂಗಳೂರಿನಿಂದ ಸ್ವಗ್ರಾಮಕ್ಕೆ ಮರಳಿದ 400 ಕಾರ್ಮಿಕರಿಗೆ ಕ್ವಾರಂಟೈನ್ ಲ್ಲಿರಲು ಸೂಚನೆ

0
108

ಯಾದಗಿರಿ,ಶಹಾಪುರ: ತಾಲ್ಲೂಕಿನ ಸಗರ ಗ್ರಾಮದಲಿ ನಿನ್ನೆ ಮತ್ತು ಇವತ್ತು ನಾಲ್ಕುನೂರು ಜನ ಕಾರ್ಮಿಕರು ಬೆಂಗಳೂರಿನಿಂದ ಸ್ವಗ್ರಾಮವಾದ ಸಗರಕ್ಕೆ ಆಗಮಿಸಿರುವುದರಿಂದ ಎಲ್ಲರಿಗೂ ಕಾರಂಟೈಮ್ ನಲ್ಲಿರುವಂತೆ ಸೂಚಿಸಲಾಗಿದೆ.

ಸದ್ಯಕ್ಕೆ ಎಲ್ಲರೂ ಸಗರದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತಪಾಸಣೆ ನಡೆಸಲಾಗುತ್ತಿದೆ. ಇದೇ ಗ್ರಾಮದಲ್ಲಿರುವ ಒಬ್ಬ ವ್ಯಕ್ತಿ ಎರಡು ದಿನಗಳ ಹಿಂದೆ ದುಬೈನಿಂದ ಆಗಮಿಸಿದ್ದರಿಂದ ಆ ವ್ಯಕ್ತಿಗೆ ಕೂಡ ತಪಾಸಣೆಗೆ ಒಳಗಾಗುವಂತೆ ಐದಾರು ಬಾರಿ ಸೂಚಿಸಿದರೂ ಬೇಜವಾಬ್ದಾರಿ ವಹಿಸಿರುವುದರಿಂದ  ಆ ವ್ಯಕ್ತಿಯನ್ನು ಹೆಚ್ಚಿನ ತಪಾಸಣೆಗಾಗಿ ಕಲಬುರಗಿಗೆ ಶಿಫ್ಟ್ ಮಾಡಲಾಗಿದೆ.

Contact Your\'s Advertisement; 9902492681

ಆದರೆ ವೈದ್ಯರು ಕರೋನಾ ಶಂಕೆಬಗ್ಗೆ ಇನ್ನೂ ದೃಢಪಡಿಸಿಲ್ಲ.

ದುಬೈಯಿಂದ ಆಗಮಿಸಿರುವ ಈ ವ್ಯಕ್ತಿ ೧೦ ದಿನಗಳಿಂದ ಕ್ವಾರಂಟೈನ್ನಲ್ಲಿದ್ದ ಎಂದು ತಿಳಿದು ಬಂದಿದೆ. ಇಡೀ ಪ್ರಪಂಚವೇ ಕರೋನಾ ವೈರಸ್ ಕ್ಕೆ ತುತ್ತಾಗಿರುವ ಘಟನೆ ಎಲ್ಲರಿಗೂ ಗೊತ್ತಿರುವ ವಿಷಯವೇ ಆದರೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಈ ಮಹಾಮಾರಿ ವೈರಸ್ಸು ಸಾರ್ವಜನಿಕರಲ್ಲಿ ಭಯ ಭೀತಿಯನ್ನು ಹುಟ್ಟಿಸುತ್ತಿದೆ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here