ಕೊರೊನಾ ಎಫೆಕ್ಟ್ ಹಾಲಿ ಮಾಜಿ ಶಾಸಕರಿಗೆ ಜನರ ಭೇಟಿ ನಿಷೇಧ

0
31

ಯಾದಗಿರಿ, ಸುರಪುರ: ಕೊರೊನಾ ಎಫೆಕ್ಟ್‌ನಿಂದಾಗಿ ದೇಶದಲ್ಲಿ ಲಾಕ್‌ಡೌನ್ ಘೋಷಣೆಯಾಗಿದ್ದರ ಪರಿಣಾಮವಾಗಿ ಹಾಗು ಕೊರೊನಾ ಸೊಂಕು ಸಾಂಕ್ರಾಮಿಕವಾಗಿದ್ದರಿಂದ ಒಬ್ಬರಿಗೊಬ್ಬರಿಗೆ ಬೇಗನೆ ಹರಡುವ ಕಾರಣದಿಂದ ಜನಪ್ರತಿನಿಧಿಗಳನ್ನು ಸಾರ್ವಜನಿಕರು ಭೇಟಿ ನೀಡದಂತೆ ಸರಕಾರ ಆದೇಶ ಜಾರಿಗೊಳಿಸಿದೆ.

ನಗರದಲ್ಲಿರುವ ಹಾಲಿ ಶಾಸಕರಾದ ನರಸಿಂಹ ನಾಯಕ (ರಾಜುಗೌಡ) ಹಾಗು ಮಾಜಿ ಶಾಸಕರಾದ ರಾಜಾ ವೆಂಕಟಪ್ಪ ನಾಯಕ ಇವರುಗಳಿಗೆ ಕಚೇರಿ ಹಾಗು ಮನೆಗಳ ಮುಖ್ಯದ್ವಾರದಲ್ಲಿ ನಗರದ ಪೊಲೀಸರು ನೋಟಿಸ್ ಅಚಿಟಿಸಿದ್ದು,ಕೊರೊನಾ ಸಾಂಕ್ರಾಮಿಕ ರೋಗ ಹರಡದಂತೆ ಮುಂಜಾಗ್ರತೆಗಾಗಿ ಜಿಲ್ಲೆಯಾದ್ಯಂತ ಕಲಂ ೧೪೪ ಅಡಿ ನಿಷೇಧಾಜ್ಞೆ ಜಾರಿಯಾಗಿರುವುದರಿಂದ ಸಾರ್ವಜನಿಕರು ಭೇಟಿ ಮಾಡಲು ಅವಕಾಶ ಇರುವುದಿಲ್ಲ.ಸಾರ್ವಜನರಿಕರು ಸಹಕರಿಸಬೇಕೆಂದು ಸೂಚನೆಯ ಪೊಲಿಸ್ ಪ್ರಕಟಣೆಯ ನೋಟಿಸ್ ಅಂಟಿಸಿದ್ದರಿಂದ ಹಾಲಿ ಮತ್ತು ಮಾಜಿ ಶಾಸಕರನ್ನು ಭೇಟಿ ಮಾಡಲು ಬಂದ ಜನತೆ ನೋಟಿಸ್ ನೋಡಿ ಸಹಕರಿಸುತ್ತಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here