ಸಿಎಂ ಪರಿಹಾರ ನಿಧಿಗೆ ಗಾಣಗಾಪೂರ ದತ್ತಾತ್ರೇಯ ದೇವಸ್ಥಾನದ ಅರ್ಚಕರಿಂದ 2.5 ಲಕ್ಷ ದೇಣಿಗೆ

0
63

ಕಲಬುರಗಿ: ಕೊವಿಡ 19 ಕೊರೊನಾ ಸೋಂಕನ್ನು ತಡೆಗಟ್ಟಲು ಮುಖ್ಯ ಮಂತ್ರಿಗಳು ಸಾರಿರುವ ಯುದ್ದಕ್ಕೆ ನೆರವು ನೀಡುವ ನಿಟ್ಟಿನಲ್ಲಿ ಅಫಜಲಪುರ ತಾಲೂಕಿನ ಗಾಣಾಗಾಪೂರ ದತ್ತಾತ್ರೇಯ ದೇವಸ್ಥಾನದ ಕ್ಷೇತ್ರದ ಅರ್ಚಕರಾದ ನಂದು ಭಟ್ ಪೂಜಾರಿ, ನಾಗು ಭಟ,ಪೂಜಾರಿ ಅವರಿಂದ 2.5 ಲಕ್ಷ ರೂಪಾಯಿಗಳ ಚೆಕ್ಕನ್ನು ಮುಖ್ಯ ಮಂತ್ರಿಗಳ ಪರಿಹಾರ ನಿಧಿಗೆ ಮಾಲಿಕಯ್ಯಾ ಗುತ್ತೆದಾರ ಮಾಜಿ ಸಚಿವರು ಕರ್ನಾಟಕ ಸರಕಾರ ಇವರ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳಿಗೆ ಚೆಕ್ ಹಸ್ತಾಂತರಿಸಲಾಗಿದೆ.

ಈ ಮಾಹಾ ಮಾರಿ ಸೋಂಕನ್ನು ನಿಯಂತ್ರಿಸಲು ಕೇಂದ್ರ ಸರಕಾರ ಹಾಗು ರಾಜ್ಯ ಸರಕಾರದ ಲಾಕಡೌನ್ ನಿರ್ದೇಶನವನ್ನು ತಪ್ಪದೆ ಪಾಲಿಸಿಬೇಕಾಗಿದೆ ಮತ್ತು ಸಾಮಾಜಿಕ ಅಂತರ ಕಾಯ್ದು ಕೊಂಡಲ್ಲಿ ಮಾತ್ರ ಸೋಂಕು ಹರಡದಂತೆ ತಡೆಯಬಹದು ಎಂದು  ಜಾಗ್ರತೆ ಮೂಡಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಹಾಗೂ ಅಧಿಕಾರಿಗಳ, ವೈದ್ಯರ ತಂಡ ಮತ್ತು ಮಾದ್ಯಮ ಮಿತ್ರರು ಹಗಲು ಇರಳು ಉತ್ತಮ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಕಾರ್ಯ ಎಂದು ಮಾಲಿಕಯ್ಯಾ ಗುತ್ತೆದಾರ ಅವರು ಎಲ್ಲರಿಗೂ ಅಭಿನಂದನೆಗಳು ಸಲ್ಲಿಸಿದ್ದಾರೆ‌.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here