ಕೊರೊನಾ ನಿರ್ಮೂಲನೆಗೆ ಮನೆಯಲ್ಲಿರುವುದೆ ದೊಡ್ಡ ಅಸ್ತ್ರ: ಚನ್ನಮಲ್ಲಿಕಾರ್ಜುನ ಶಿವಾಚಾರ್ಯ

0
37

ಸುರಪುರ: ಜಗತ್ತಿಗೆ ಮಹಾಮಾರಿಯಾಗಿ ಕಾಡುತ್ತಿರುವ ಕೋವಿಡ್-೧೯ ನಿರ್ಮೂಲನೆಗೊಳಿಸಲು ಎಲ್ಲರು ಮನೆಯಲ್ಲಿರುವುದೆ ದೊಡ್ಡ ಅಸ್ತ್ರವಾಗಿದೆ ಎಂದು ಲಕ್ಷ್ಮೀಪುರ ಶ್ರೀಗಿರಿ ಮಠದ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

ನಗರದ ಬಸ್ ನಿಲ್ದಾಣದಲ್ಲಿದ್ದ ಗ್ರಾಮೀಣ ಭಾಗದ ಜನತೆಗೆ ಟೀಂ ರಾಜುಗೌಡ ಸೇವಾ ಸಮಿತಿಯಿಂದ ನೀಡಲಾಗುತ್ತಿದ್ದ ಆಹಾರ ಮತ್ತು ಹಣ್ಣುಗಳನ್ನು ವಿತರಿಸಿ ಮಾತನಾಡಿ,ಸರಕಾರ ನಮಗಾಗಿ ಲಾಕ್‌ಡೌನ್ ಜಾರಿಗೊಳಿಸಿದೆ ಇದಕ್ಕೆ ನಾವೆಲ್ಲ ಬೆಂಬಲಿಸಿದರೆ ಕೊರೊನಾ ಹೇಗೆ ಬಂದಿದೆಯೊ ಹಾಗೆಯೆ ಓಡಿ ಹೋಗಲಿದೆ.ಇದಕ್ಕೆ ಮದ್ದು ಎಂದರೆ ಮನೆಯಲ್ಲಿರುವುದು,ಇದನ್ನು ತಾವೆಲ್ಲರು ಅರಿತುಕೊಳ್ಳಬೇಕೆಂದು ಹೇಳಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಗಂಗಾಧರ ನಾಯಕ, ಪರಶುರಾಮ ನಾಟೆಕರ್, ಹರೀಶ ತ್ರೀವೆದಿ, ತಿಗಳಪ್ಪ ಕವಡಿಮಟ್ಟಿ,ಪವನ್, ಚೇತನ್, ಆಕಾಶ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here