ಕೂಲಿಕಾರರ ಸಂಘದಿಂದ ಕೂಲಿಕಾರ್ಮಿಕರಿಗೆ ಉದ್ಯೋಗ ನೀಡಲು ಆಗ್ರಹ

0
88

ಸುರಪುರ: ಕೊರೊನಾ ಕಾರಣದಿಂದ ಭಾರತ ಲಾಕ್‌ಡೌನ್ ಘೋಷಣೆಯಿಂದಾಗಿ ನಾಡಿನ ಎಲ್ಲಾ ಕೂಲಿ ಕಾರ್ಮಿಕರು ದೊಡ್ಡ ಮಟ್ಟದಲ್ಲಿ ಸಂಕಷ್ಟಕ್ಕೆ ಸಿಕ್ಕಿದ್ದು ಜೀವನ ನಡೆಸುವುದು ಕಷ್ಟಕರವಾಗಿದೆ.ಆದ್ದರಿಂದ ಎಲ್ಲಾ ಉದ್ಯೋಗ ಖಾತ್ರಿಯ ಕೂಲಿ ಕಾರ್ಮಿಕರಿಗೆ ದಿನದ ಭತ್ಯೆಯಾಗಿ ೫೦೦ ರೂಪಾಯಿಗಳು ನೀಡುವಂತೆ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಮುಖಂಡರು ಒತ್ತಾಯಿಸಿದರು.

ಈ ಕುರಿತು ಮುಖ್ಯಮಂತ್ರಿಗಳಿಗೆ ಮನವಿ ಮಾಡಿರುವ ಅವರು ಕೃಷಿ ಕೂಲಿಕಾರರ ಖಾತೆಗಳಿಗೆ ಮತ್ತು ಬಿಪಿಎಲ್ ಮತ್ತು ಕಡುಬಡವರ ಜನಧನ್ ಖಾತೆ ಹೊಂದಿದವರಿಗೆ ೫೦೦೦ ರೂಪಾಯಿಗಳ ಸಹಾಯ ಧನ ನೀಡಬೇಕು.ಸಣ್ಣ ಸಣ್ಣ ರೈತರ ಜಮೀನುಗಳಲ್ಲಿ ಪ್ರತಿ ಜಮೀನಲ್ಲಿ ಐದು ಜನರಿಗೆ ಸಾಮಾಜಿಕ ಅಂತರ ಕಾಯ್ದುಕೊಂಡು ಕೆಲಸ ಮಾಡಲು ಉದ್ಯೋಗ ನೀಡಬೇಕು.

Contact Your\'s Advertisement; 9902492681

ತಾಲೂಕಿನ ನಾಗರಾಳ, ಆಲ್ದಾಳ, ಬೊನ್ಹಾಳ,ಮಂಗಿಹಾಳ,ಜಾಲಿಬೆಂಚಿ,ಕನ್ನೆಳ್ಳಿ,ಬಾಚಿಮಟ್ಟಿ, ದೇವಾಪುರ,ಅರಳಹಳ್ಳಿ, ಕವಡಿಮಟ್ಟಿ,ಏವೂರ ಸೇರಿದಂತೆ ಎಲ್ಲಾ ಗ್ರಾಮಗಳ ಕಾರ್ಮಿಕರಿಗೆ ಫಾರಂ ನಂಬರ್ ೬ರಡಿ ನೊಂದಣಿ ಮಾಡಿಕೊಳ್ಳಬೇಕು, ಕೆಲಸ ಮಾಡುವ ಎಲ್ಲಾ ಕಾರ್ಮಿಕರಿಗೆ ಮಾಸ್ಕ್ ಮತ್ತಿತರೆ ಸಲಕರಣೆ ನೀಡಬೇಕು ಹಾಗು ನಾಡಿನ ಎಲ್ಲಾ ಜನತೆಗೆ ಉಚಿತವಾಗಿ ಮಾಸ್ಕ್ ಸ್ಯಾನಿಟೈಜರ್ ನೀಡಬೇಕೆಂದು ಆಗ್ರಹಿಸಿ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಅಂಬ್ರೇಶ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಬರೆದ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಸಂಘದ ತಾಲೂಕು ಅಧ್ಯಕ್ಷ ನಭಿ ರಸೂಲ್ ನದಾಫ್,ಕಾರ್ಯದರ್ಶಿ ರಾಜು ದೊಡ್ಡಮನಿ,ಮುಖಂಡ ಖಾಜೆಸಾಬ್ ದಳಪತಿ ನಾಗರಾಳ ಇತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here