ಕೊರೋನಾ ವಿರುದ್ಧ ಜ್ಯೋತಿ ಬೆಳಗಿಸಿ: ಪ್ರಧಾನಿ ಕರೆಗೆ ಎಸ್‌ಯುಸಿಐ ಅಪಹಾಸ್ಯ

0
26

ಕಲಬುರಗಿ: ಮಹಾಮಾರಿ ಕೊರೋನಾ ಸೋಂಕು ತಡೆಗೆ ಏಪ್ರಿಲ್ ೫ರಂದು ರಾತ್ರಿ ೯ ಗಂಟೆಗೆ ಪ್ರತಿ ಮನೆ, ಮನೆಯಲ್ಲಿ ಜ್ಯೋತಿ ಬೆಳಗಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಕರೆ ಕೊಟ್ಟಿದ್ದು ಹಾಸ್ಯಾಸ್ಪದ ಎಂದು ಎಸ್‌ಯುಸಿಐ (ಕಮ್ಯುನಿಸ್ಟ್) ಪಕ್ಷದ ಜಿಲ್ಲಾ ಕಾರ್ಯದರ್ಶಿ ಎಚ್.ವಿ. ದಿವಾಕರ್ ಅವರು ಟೀಕಿಸಿದ್ದಾರೆ.

ಕೊರೋನಾ ವೈರಸ್‌ನಿಂದ ಸೋಂಕಿತರ ಮತ್ತು ಮೃತರಾದವರ ಸಂಖ್ಯೆ ದಿನನಿತ್ಯ ಅಪಾಯಕಾರಿಯಾಗಿ ಏರಿಕೆಯಾಗುತ್ತಲೇ ಇದೆ. ಆದರೆ ಅವಶ್ಯಕ ಪರೀಕ್ಷಾ ಕಿಟ್‌ಗಳು, ಪರೀಕ್ಷಾ ಕೇಂದ್ರಗಳು, ಆಸ್ಪತ್ರೆಗಳಲ್ಲಿ ಅವಶ್ಯಕವಾದ ವೆಂಟಿಲೇಟರ್ ಮತ್ತಿತರ ವೈದ್ಯಕೀಯ ಉಪಕರಣಗಳು, ವೈದ್ಯರಿಗೆ, ನರ್ಸ್‌ಗಳಿಗೆ ಮತ್ತು ಆರೋಗ್ಯ ಕಾರ್ಯಕರ್ತರಿಗೆ ಬೇಕಾದ ಸುರಕ್ಷಾ ಸಾಧನಗಳ ಕೊರತೆಯು ಬಯಲಾಗುತ್ತಲೇ ಇದೆ ಎಂದು ಅವರು ಹೇಳಿಕೆಯಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ.

Contact Your\'s Advertisement; 9902492681

ಇನ್ನೊಂದೆಡೆ, ಮೊದಲೇ ಹಸಿವೆಯಿಂದ ಪ್ರತಿನಿತ್ಯ ಬಡವರು ಜೀವ ಕಳೆದುಕೊಳ್ಳುವ ನಮ್ಮ ದೇಶದಲ್ಲಿ ಏಕಾಏಕಿ ಲಾಕ್ಡೌನ್ ಕಾರಣದಿಂದಾಗಿ ಅದು ಇನ್ನ? ಉಲ್ಬಣಗೊಂಡು ಕೋಟಿಗಟ್ಟಲೆ ಕೆಲಸ ಕಳೆದುಕೊಂಡ  ಕಾರ್ಮಿಕರು, ದಿನಗೂಲಿ ಕಾರ್ಮಿಕರು, ವಲಸೆ ಕಾರ್ಮಿಕರು, ರಿಕ್ಷಾ ಚಾಲಕರು, ಬೀದಿ ಬದಿ ವ್ಯಾಪಾರಿಗಳು, ಮನೆಗೆಲಸದವರು ಮುಂತಾದವರು ಹಸಿವೆಯಿಂದ ನರಳುವಂತಾಗಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಇಂತಹ ಪರಿಸ್ಥಿತಿಯನ್ನು ಎದುರಿಸುವ ನಿಟ್ಟಿನಲ್ಲಿ  ಏಪ್ರಿಲ್ ೩ ರಂದು  ಸನ್ಮಾನ್ಯ ಪ್ರಧಾನಿಗಳು ಮಹತ್ವವಾದ ಘೋ?ಣೆ ಮಾಡುತ್ತಾರೆ ಎಂದು ದೇಶದ ಜನಸಾಮಾನ್ಯರು ನಿರೀಕ್ಷಿಸಿದ್ದರು. ಆದರೆ ಶ್ರೀಮಾನ್ ಮೋದಿಯವರು ಮಾಡಿರುವುದು ನಿರಾಶಾದಾಯಕ ಮಾತ್ರವಲ್ಲದೆ ಕ್ರೂರ ಹಾಸ್ಯವಾಗಿದೆ. ಏಪ್ರಿಲ್ ೫ರಂದು ರಾತ್ರಿ ೯ ಗಂಟೆಗೆ ೯ ನಿಮಿ?ಗಳ ಕಾಲ ನಮ್ಮ ಮನೆಯ ದೀಪಗಳನ್ನು ಆರಿಸಿ, ಮನೆಯ ಬಾಗಿಲಿಗೆ ಬಂದು ಮೊಂಬತ್ತಿ, ದೀಪ ಅಥವಾ ಟಾರ್ಚುಗಳನ್ನು ಉರಿಸುವಂತೆ ಅವರು ಕರೆ ನೀಡಿದ್ದಾರೆ ಎಂದು ಅವರು ಲೇವಡಿ ಮಾಡಿದ್ದಾರೆ.

ಇತ್ತೀಚೆಗೆ? ಜನರಿಗೆ ಘಂಟೆ ಬಾರಿಸಲು ಹೇಳಿದಂತೆ, ಸರ್ಕಾರದ ಜವಾಬ್ದಾರಿಯಿಂದ ಧಾರ್ಮಿಕ ನಿಗೂಢತೆಯೆಡೆಗೆ, ಸರ್ಕಾರ ಮತ್ತು ಆಳುವ ಪಕ್ಷಕ್ಕೆ ಕುರುಡು ವಿಧೇಯತೆಯೆಡೆಗೆ ಜನರ ಗಮನವನ್ನು ಸೆಳೆಯಲು ಮಾಡಿರುವ ಚತುರ ಕುತಂತ್ರ ಇದಾಗಿದೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.

ಜನತೆ ಎಚ್ಚರಿಕೆಯಿಂದ ಇದ್ದು ಗಂಭೀರ ಪರಿಸ್ಥಿತಿಯನ್ನು ಎದುರಿಸಲು ಅವಶ್ಯಕ ಕ್ರಮಗಳನ್ನು ಕೈಗೊಳ್ಳುವುದಕ್ಕಾಗಿ ಸರ್ಕಾರಗಳ ಮೇಲೆ ಒತ್ತಡ ಹೇರಲು ತಮ್ಮ ದನಿ ಎತ್ತಬೇಕೆಂದು ಅವರು ಮನವಿ ಮಾಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here