ಲಾಕ್‌ಡೌನ್‌ಗೆ ಶಖಾಪೂರ್ ಶ್ರೀಗಳ ಸ್ಪಂದನೆ

0
31

ಕಲಬುರಗಿ: ಮಹಾಮಾರಿ ಕೊರೋನಾ ಸೋಂಕು ತಡೆಯಲು ಕೇಂದ್ರ ಹಾಗೂ ರಾಜ್ಯ ಸರ್ಕಾರವು ಕೈಗೊಂಡ ಕ್ರಮಗಳನ್ನು ಸರ್ವರೂ ಪಾಲಿಸಬೇಕು ಎಂದು ಶಖಾಪೂರ್ ತಪೋವನ ಮಠದ ಡಾ. ಸಿದ್ಧರಾಮ್ ಶಿವಾಚಾರ್ಯರು ಕರೆ ನೀಡಿದ್ದಾರೆ.

ಜಾತಿ ಮತ ಪಂತ ಯನ್ನದೇ ನಾವೆಲ್ಲರೂ ಒಂದಾಗಿ ನಮ್ಮ ನಮ್ಮ ಮನೆಯಲ್ಲಿ ಇದ್ದು ಕರೋನಾ ರೋಗವನ್ನು ಹರಡದಂತೆ ಎಚ್ಚರ ವಹಿಸಬೇಕು. ಗ್ರಾಮೀಣ ಪ್ರದೇಶಗಳಲ್ಲಿ ಇರುವ ನಮ್ಮ ರೈತ ಬಾಂಧವರು ರೋಗವನ್ನು ನಿಯಂತ್ರಿಸಲು ನಿಮ್ಮ ಸಹಕಾರ ಅವಶ್ಯಕವಾಗಿದೆ. ಸರಕಾರದ ಆದೇಶವನ್ನು ನಾವು ಪಾಲಿಸಬೇಕು ಎಂದು ಅವರು ಹೇಳಿಕೆಯಲ್ಲಿ ಸಲಹೆ ಮಾಡಿದ್ದಾರೆ. ಯಾರಿಗಾದರು ಈ ಸೊಂಕಿನ ಲಕ್ಷಣ ಕಂಡುಬಂದರೆ ತಕ್ಷಣ ವೈದ್ಯರ ಸಲಹೆಯನ್ನು ಪಡೆಯಿರಿ. ರೋಗ ಮುಚ್ಚಿಡಬೇಡಿರಿ. ನಮ್ಮ ದೇಶಕ್ಕೆ ಬಂದಿರುವ ಕಷ್ಠ ನಿವಾರಣೆಗೆ ನಿಮ್ಮೆಲ್ಲರ ಸಹಕಾರ ಅಗತ್ಯ ಎಂದು ಅವರು ಪ್ರತಿಪಾದಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here