ಕಲಬುರಗಿ: ಇಲ್ಲಿನ ಭಾವೈಕ್ಯತೆ ಸಂಗಮ ಎಂದೇ ಕರೆಸಿಕೊಳ್ಳುವ ರುಕುಮೋದ್ದಿನ್ ತೋಲಾ ಮತ್ತು ರಾಣೇಶ್ ಪೀರ್ ದರ್ಗಾದ ಜಾತ್ರೆಯನ್ನು ಕೊರೋನಾ ಹರಟದಂತೆ ತಡೆಗೆ ನಿಷೇದಾಜ್ಞೆ ಹಾಗೂ ಲಾಕ್ ಡೌನ್ ಹಿನ್ನೆಲೆಯಲ್ಲಿ ರದ್ದು ಪಡಿಸಲಾಗಿದೆ ಎಂದು ದರ್ಗಾದ ಮುತವಲಿ ಅನ್ವರ್ ಹುಸೇನ್ ತಿಳಿಸಿದ್ದಾರೆ.
ನಗರದ ಹೊರವಲಯದ ಆಳಂದ ರಸ್ತೆಯಲ್ಲಿರುವ ಈ ದರ್ಗಾ, ಇದೇ ಏ. 7,8 ಮತ್ತು 9 ರಂದು ವಾರ್ಷಿಕ ಜಾತ್ರಾ ಮಹೋತ್ಸವ ರಾಜ್ಯ ವಕ್ಫ್ ಬೋರ್ಡ್ ಆದೇಶದಂತೆ ರದ್ದು ಪಡಿಸಲಾಗಿದೆ ಎಂದು ತಿಳಿದುಬಂದಿದೆ.
ದರ್ಗಾಕ್ಕೆ ಪ್ರತಿ ಗುರುವಾರ ಮತ್ತು ಅಮವಾಸ್ಯೆ ದಿನದಂದು ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ತಾಣವಾಗಿದೆ. ಅಲ್ಲದೇ ಜಿಲ್ಲೆಯ ಹಿಂದೂ ಮುಸ್ಲಿಂ ಭಾವೈಕ್ಯತೆಯ ಸಂಗಮ ಎಂದೆ ಖ್ಯಾತಿ ಪಡೆದಿದೆ.