ಪರಿಹಾರ ನಿಧಿಗೆ 1 ತಿಂಗಳ ಸಂಬಳ ನೀಡಿದ ಪಿಎಸ್ಐ: ರಾಜಕುಮಾರ ಜಾಮಗೊಂಡ

0
91

ಶಹಾಪುರ: ಮಹಾಮಾರಿ ಕರೋನಾ ವೈರಸ್ ನಿಂದ ತಲ್ಲಣಗೊಂಡು ಇಡೀ ಭಾರತ ದೇಶವೇ ಲಾಕ್ ಡೌನ್ ಆಗಿರುವ ಹಿನ್ನೆಲೆಯಲ್ಲಿ ಕರೋನಾ ವೈರಸ್ ಪರಿಹಾರ ನಿಧಿಗೆ ಭೀಮರಾಯ ಗುಡಿ ಪೊಲೀಸ್ ಠಾಣೆಯ ಪಿಎಸ್ಐ ಆಗಿರುವ ರಾಜಕುಮಾರ ಜಾಮಗೊಂಡ ಅವರು ಒಂದು ತಿಂಗಳ ಸಂಬಳವನ್ನು ನೀಡಿ ಮಾನವೀಯತೆ ಮೆರೆದಿದ್ದಾರೆ.

ಹಗಲಿರುಳು ಸೇವೆ ಸಲ್ಲಿಸುವುದರ ಜೊತೆಗೆ ಜನರಿಗೆ ಆತ್ಮಸ್ಥೈರ್ಯ ತುಂಬುತ್ತಾ ನಿಮ್ಮ ಜತೆಗೆ ನಾವಿದ್ದೇವೆ ಯಾವುದಕ್ಕೂ ಭಯ ಬೀಳದೆ ಕರೋನಾ ಸೋಂಕು ತಗುಲದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಿ ಅದರಂತೆ ಯಾರೂ ಮನೆ ಬಿಟ್ಟು ಹೊರಗಡೆ ಬರಬೇಡಿ ಎಂದು ಮನವಿ ಮಾಡಿಕೊಂಡರು.

Contact Your\'s Advertisement; 9902492681

ಇವರ ಕಾರ್ಯವೈಖರಿ ಹಾಗೂ ಸಾಮಾಜಿಕ ಕಳಕಳಿಯುಳ್ಳ ಎಲ್ಲರೊಂದಿಗೆ ಭಾವನಾತ್ಮಕವಾಗಿ ಬೆರೆಯುವ ಮೃದು ಮನಸ್ಸಿನ ಸ್ವಾಭಾವಿಕ ವ್ಯಕ್ತಿಯಾಗಿರುವ ರಾಜಕುಮಾರ ಜಮಾಗೊಂಡರವರ ಕಾರ್ಯಕ್ಕೆ ಅವರ ಆತ್ಮೀಯ ಗೆಳೆಯರ ಬಳಗ ಹರ್ಷ ವ್ಯಕ್ತಪಡಿಸಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here