ಸುರಪುರ: ಕಳೆದ ನಲವತ್ತು ದಿನಗಳಿಂದ ಲಾಕ್ಡೌನ್ ಘೋಷೆಣೆಯಾಗಿದ್ದರಿಂದ ಸಾರಿಗೆ ಸಂಚಾರ ಸಂಪೂರ್ಣ ಬಂದ್ ಮಾಡಲಾಗಿತ್ತು.ಇದರಿಂದಾಗಿ ನಗರದ ಬಸ್ ನಿಲ್ದಾಣ ಬಂದ್ ಮಾಡಲಾಗಿತ್ತು.ಆದರೆ ಬುಧವಾರ ಬೆಳಿಗ್ಗೆ ಅಗ್ನಿ ಶಾಮಕ ದಳದ ಸಿಬ್ಬಂದಿ ಬಸ್ ನಿಲ್ದಾಣ ಸ್ವಚ್ಛತೆಯನ್ನು ನಡೆಸಿದರು.
ಈ ಸಂದರ್ಭದಲ್ಲಿ ಅನೇಕ ಜನ ಸಾರ್ವಜನಿಕರು ಲಾಕ್ಡೌನ್ ಮುಗಿಯಲಿದೆ,ಇನ್ಮೇಲೆ ಬಸ್ ಸಂಚಾರ ಶುರುವಾಗಬಹುದು ಅದಕ್ಕಾಗಿ ಸ್ವಚ್ಛತೆ ಮಾಡಲಾಗುತ್ತಿದೆ ಎಂದು ಮಾತನಾಡಿಕೊಳ್ಳುತ್ತಿರುವುದು ಕಂಡುಬಂತು.ಅಲ್ಲದೆ ಸ್ವಚ್ಛತೆಯನ್ನು ಕಂಡು ಬಸ್ ಸಂಚಾರ ಆರಂಭಗೊಳ್ಳುವುದೆಂದು ಸಾರ್ವಜನಿಕರು ಸಂತಸ ವ್ಯಕ್ತಪಡಿಸಿದರು.