ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯ ಕಲಬುರಗಿ ಹಾಗೂ ಎನ್.ಎಸ್.ಎಸ್. ವತಿಯಿಂದ ಗುಲಬರ್ಗಾ ಜಿಲ್ಲೆ ಹಾಗೂ ಹಳ್ಳಿಹಳ್ಳಿಗಳಲ್ಲಿ ಕೋರೋನಾ ಬಗ್ಗೆ ಹಾಡಿನ ಮೂಲಕ ಜನರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮವನ್ನು ಗುಲಬರ್ಗಾ ವಿಶ್ವವಿದ್ಯಾಲಯದ ಕುಲಸಚಿವ ಕೆ. ವಿಜಯಕುಮಾರ ಅವರು ಚಾಲನೆ ನೀಡಿದರು. ಎನ್.ಎಸ್.ಎಸ್. ನಿರ್ದೇಶಕರಾದ ರಮೇಶ ಲಂಡನ್ಕರ, ಸಂಜೀವಕುಮಾರ ಕಾಂಬಳೆ, ಡಾ. ಮಹಾದೇವ ಬಡಿಗೇರ, ತುಳಸಿರಾಮ ಸಿಂಧೆ, ರಾಹುಲ್ ಚವ್ಹಾಣ ಅವರು ಗುವಿವಿಯ ವಾಹನದಲ್ಲಿ ಸ್ಪೀಕರ ಹಚ್ಚಿ ಜನರಲ್ಲಿ ಅರಿವ ಮೂಡಿಸಲಾಯಿತು.