ಕನ್ಹಯ್ಯಕುಮಾರ ಜೀವನಾಧಾರಿತ ಸಿನೆಮಾ ತಯಾರಿ? ನಟ ಸಲ್ಮಾನ್ ಖಾನ್  ಅಭಿನಯ!

0
181

ಬಾಂಬೆ: ಜೆಎನ್ ಯು ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ, ಸಿಪಿಐ ಪಕ್ಷದ ಲೋಕ ಸಭಾ ಪಕ್ಷದ ಬೆಗೂಸರಾಯ ಅಭ್ಯರ್ಥಿ ಕನ್ಹಯ್ಯ ಕುಮಾರ ಅವರ ಜೀವನ ಆಧಾರಿತ ಡಿಜಿಟಲ್ ಡೆಬಯೂಟ್ ಸಿನೆಮಾವನ್ನು ನಿರ್ಮಿಸಲು ನಿರ್ದೇಶಕ ಅಲಿ ಅಬ್ಬಾಸ್ ಜಾಫರ್ ತಯಾರಿ ನಡೆಸಿದ್ದಾರೆ.

ಕನ್ಹಯ್ಯ ಕುಮಾರ ಅವರ ಜೀವನ ಆಧಾರಿತ ಸಿನೆಮಾ ಇದ್ದಾಗಿದ್ದು, ಸಿನೆಮಾದ ಹೆಸರು ತಾಂಡವ್ ಆಗಿದೆ. ಸಿನೆಮಾದಲ್ಲಿ ಬಾಲಿವುಡ್, ಸುಪರ್ ಸ್ಟಾರ ಸಲ್ಮಾನ್ ಖಾನ ಅವರು ಅಭಿನಯಸಲಿದ್ದಾರೆ. ಸಲ್ಮಾನ್ ಖಾನ್ ಜೊತೆ ಟೈಗರ್ ಜಿಂದಾ ಹೈ ಮತ್ತು ಸುಲ್ತಾನ್ ಸಿನೆಮಾಗಳಲ್ಲಿ ನಟಿಸಿದ ಅಲಿ ಅಬ್ಬಾಸ್ ಜಾಫರ್ ಅವರು ಈ ಸಿನೆಮಾ ನಿರ್ದೇಶಿಸಲಿದ್ದು, ಸಿನೆಮಾದ ಕಥೆಯ ಕುರಿತು ಸಲ್ಮಾನ್ ಖಾನ್ ಗೆ ತಿಳಿಸಿದಾಗ ಅವರು ಪ್ರಥಮ ಕೋರಿಕೆಯಲ್ಲೇ ಒಪ್ಪಿಕೊಂಡಿದ್ದಾರೆ ಎಂದು ಗೊತ್ತಾಗಿದೆ. ಜೆ.ಪಿ ಮೂಮೆಂಟ್ ನಂತರ ದೇಶದಲ್ಲಿ ವಿಭೀನವಾಗಿ ಮೂಮುಂಟ್ ಆರಂಭವಾಗಿರುವುದಾಗಿ ನಿರ್ದೇಶಕ ಸಲ್ಮಾನ್ ಗೆ ವಿವರಿಸುವುದರಿಂದ ಸಲ್ಮಾನ್ ಖಾನ್ ಈ ಸಿನೆಮಾಕ್ಕೆ ತೆರೆಗೆ ತರಲು ತನ್ನ ಎರಡು ಸಿನೆಮಾಗಳ ಬ್ರೇಕ್ ಟೈಮ್ ಲ್ಲಿ ತಾಂಡವ್ ಸಿನೆಮಾಗೆ ಒಪ್ಪಿಕೊಂಡಿದ್ದಾರೆಂದು ತಿಳಿದುಬಂದಿದೆ.

Contact Your\'s Advertisement; 9902492681

ಸಿನೆಮಾ ಕಥೆ 2016ರ ನಂತರ ದೇಶದಲ್ಲಿ ನಡೆದ ದೇಶದ್ರೋಹಿ ಘೋಷಣೆ ಕುಗಿದ್ದ ಆರೋಪದಿಂದ ಆರಂಭವಾಗಿ, ಸಿಪಿಐ ಪಕ್ಷದಿಂದ ಲೋಕಸಭೆ ಅಭ್ಯರ್ಥಿ ಆಗುವರೆಗಿನ ಜೀವನ ಆಧರಿತ ಅಂಶಗಳನ್ನು ಸಿನೆಮಾದಲ್ಲಿ ಇರಲಿದೆ ಎಂದು  ತಿಳಿದುಬಂದಿದ್ದು. ತಾಂಡವ್ ಸಿನೆಮಾಗಾಗಿ ಸಲ್ಮಾನ್ ಖಾನ್ ತನ್ನ ತೂಕ ಕಮ್ಮಿ ಹಾಗೂ ಬಿಹಾರಿ ಹಿಂದಿ ಎಸೆಂಟ್ ಮೇಲೆ ಕೆಲಸ ಮಾಡುತ್ತಿದ್ದಾರೆಂದು ತಾಂಡವ್ ಸಿನೆಮಾದ ತಂಡ ಮಾಹಿತಿ ನೀಡಿದೆ.

ಸಲ್ಮಾನ್ ಖಾನ್ ಈಗಾಗಲೇ ಭಾರತ ಹಾಗೂ ದಬಂಗ್ 3 ಸಿನೆಮಾ ಶೂಟಿಂಗ್ ಲ್ಲಿ ಬಿಜಿ ಇದ್ದು, ತಾಂಡವ್ ಸಿನೆಮಾಕ್ಕೆ ಈ ಎರಡು ಸಿನೆಮಾದ ಶೂಟಿಂಗ್ ಮಧ್ಯೆದಲ್ಲಿ ಬ್ರೇಕ್ ಸಮಯದಲ್ಲಿ ಹಾಗೂ ಸಿನೆಮಾದ ಪೂರ್ಣಗೊಂಡಾಗ ಶೂಟಿಂಗ್ ಮಾಡುವ ತಯಾರಿ ನಡೆಸಿದ್ದಾರೆಂದು ತಾಂತವ್ ನಿರ್ದೇಶನದ ತಂಡ ತಿಳಿಸಿದೆ.

ಕನ್ಹಯ್ಯ ಕುಮಾರ ಸದ್ಯ ಸಿಪಿಐ ಪಕ್ಷದಿಂದ ಬೆಗೂಸರಾಯ ಕ್ಷೇತ್ರದಿಂದ ಲೋಕ ಸಭಾ ಅಭ್ಯರ್ಥಿಯಾಗಿ ಕಣಕಿಳಿದಿದ್ದು, ಈ ಕ್ಷೇತ್ರದಲ್ಲಿ ಬಿಜೆಪಿಯಿಂದ ಕೇಂದ್ರ ಸಚಿವ ಗಿರೀರಾಜ ಅವರಿಗೆ ಪ್ರಬಲ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಟಕರ್ ನೀಡುತ್ತಿದ್ದಾರೆ. ಸದ್ಯ ಈ ಕ್ಷೇತ್ರದ ಮತದಾನ ಪೂರ್ಣಕೊಂಡಿದ್ದು, ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ, ಭದ್ರವಾಗಿದೆ. ಮೇ 23ಕ್ಕೆ ಮತದಾನ ಫಲಿತಾಂಶ ಹೊರ ಬೀಳಲಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here