ಕೊರೊನಾ ನಿರ್ಮೂಲನೆಗೆ ಸೋಮವಾರ ಸಂಜೆ ಇಷ್ಟಲಿಂಗ ಪೂಜೆ

0
57

ಸುರಪುರ: ಜಗತ್ತಿಗೆ ಮಹಾ ಮಾರಕವಾಗಿ ಪರಿಣಮಿಸಿರುವ ಕೊರನಾ ವೈರಸ್ ನಿರ್ಮೂಲನೆಗಾಗಿ ನಾಡಿನ ಅನೇಕ ಮಠಾಧೀಶರು ಮತ್ತು ಇಷ್ಟಲಿಂಗಧಾರಿಗಳು ಸೋಮವಾರ ಸಂಜೆ ೭ ಗಂಟೆಗೆ ಇಷ್ಟಲಿಂಗ ಪೂಜೆಯ ಮೂಲಕ ಕೊರೊನಾ ನಿರ್ಮೂಲನೆಗೆ ಪ್ರಾರ್ಥಿಸಲಾಗುವುದು ಎಂದು ವೀರಶೈವ ಲಿಂಗಾಯತ ಯುವ ವೇದಿಕೆ ಮುಖಂಡರು ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ್ದು,ಸೋಮವಾರ ಸಂಜೆ ೭ಕ್ಕೆ ಎಲ್ಲಾ ವೀರಶೈವ ಲಿಂಗಾಯತರು ತಮ್ಮ ಮನೆಗಳಲ್ಲಿಯೇ ಇಷ್ಟಲಿಂಗ ಪೂಜೆ ನಡೆಸಿ ಕೊರೊನಾ ವೈರಸ್ ನಿರ್ಮೂಲನೆಯಾಗಲೆಂದು ಪ್ರಾರ್ಥಿಸೋಣ,ಈ ಅಭಿಯಾನದಲ್ಲಿ ನಾಡಿನ ಅನೇಕ ಜನ ಮಠಾಧೀಶರಾ ಸುತ್ತೂರು ಶ್ರೀಗಳು,ಚಿತ್ರದುರ್ಗ ಶ್ರೀಗಳು,ಸಿದ್ದಗಂಗಾ ಶ್ರೀಗಳು,ನಾಗನೂರು ಶ್ರೀಗಳು,ಕೂಡಲ ಸಂಗಮ ಪಂಚಮಸಾಲಿ ಪೀಠದ ಶ್ರೀಗಳು ಹೀಗೆ ನಾಡಿನ ಎಲ್ಲಾ ಮಠಾಧೀಶರು ಈ ಅಭಿಯಾನದಲ್ಲಿ ಭಾಗಿಯಾಗಲಿದ್ದಾರೆ.ನಾವುಗಳು ಎಲ್ಲರು ಇಷ್ಟಲಿಂಗ ಧಾನ್ಯದೊಂದಿಗೆ ಜಗತ್ತಿನಿಂದ ಕೊರೊನಾ ನಿರ್ಮೂಲನೆಗೆ ಪ್ರಾರ್ಥಿಸೋಣ ಎಂದು ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here