ಕೋವಿಡ್-19 ತಡೆಗೆ ಹೋಬಳಿವಾರು ಸೆಕ್ಟರ್ ಮೆಜಿಸ್ಟ್ರೇಟ್ ನೇಮಕ: ತಹಸೀಲ್ದಾರ ಸುರೇಶ್ ವರ್ಮಾ

0
26

ಶಹಾಬಾದ: ನಗರದಲ್ಲಿ ತಹಸೀಲ್ದಾರ ಸುರೇಶ ವರ್ಮಾ ನೇತೃತ್ವದಲ್ಲಿ ಕೋವಿಡ್-೧೯ ವೈರಸ್ ಹರಡುವುದನ್ನು ತಡೆಗಟ್ಟುವಿಕೆಗಾಗಿ ಮತ್ತು ಲಾಕ್‌ಡೌನ್ ಸಂಪೂರ್ಣವಾಗಿ ಅನುಷ್ಠಾನಗೊಳಿಸಲು ಹೋಬಳಿವಾರು ಸೆಕ್ಟರ್ ಮೆಜಿಸ್ಟ್ರೇಟ್ ನೇಮಕ ಮಾಡುವ ಸಭೆ ನಡೆಯಿತು.

ಈ ಸಂದರ್ಭದಲ್ಲಿ ತಹಸೀಲ್ದಾರ ಸುರೇಶ ವರ್ಮಾ ಮಾತನಾಡಿ, ಶಹಾಬಾದ ನಗರ ಸೆಕ್ಟರ್ ಮೆಜಿಸ್ಟ್ರೇಟ್ ಅಧಿಕಾರಿಯಾಗಿ ನಗರಸಭೆಯ ಪೌರಾಯುಕ್ತ ವೆಂಕಟೇಶ ಅವರನ್ನು ನೇಮಕ ಮಾಡಿದ್ದು, ಇವರ ತಂಡದಲ್ಲಿ ಪೊಲೀಸ್ ಸಿಬ್ಬಂದಿ ಬಸಪ್ಪ, ಸಿಡಿಪಿಓ ಇಲಾಖೆಯ ಜಗನ್ನಾಥರೆಡ್ಡಿ, ನಗರಸಭೆಯ ಸಿಬ್ಬಂದಿ ರಾಜೇಶ ಇರಲಿದ್ದಾರೆ. ಅಲ್ಲದೇ ಶಹಾಬಾದ ಗ್ರಾಮೀಣ ವಲಯದಸೆಕ್ಟರ್ ಮೆಜಿಸ್ಟ್ರೇಟ್ ಅಧಿಕಾರಿಯಾಗಿ ವಾಣಿಜ್ಯ ತೆರಿಗೆ ಇಲಾಖೆಯ ಸಹಾಯಕ ಆಯುಕ್ತೆ ನೀಲಗಂಗಾ, ಅವರನ್ನು ನೇಮಕ ಮಾಡಿದ್ದು, ಇವರ ತಂಡದಲ್ಲಿ ಪೊಲೀಸ್ ಸಿಬ್ಬಂದಿ ಶಂಕರಗೌಡ, ಸಿಡಿಪಿಓ ಇಲಾಖೆಯ ಸಾಯಬಣ್ಣ ಹಾಗೂ ಪಶು ಆರೋಗ್ಯ ಕೇಂದ್ರದ ಸಿಬ್ಬಂದಿ ಭೀಮರಾವ ಇರಲಿದ್ದಾರೆ. ಈ ಇಬ್ಬರ ತಂಡ ಕೋವಿಡ್-೧೯ ವೈರಸ್ ಹರಡುವುದನ್ನು ತಡೆಗಟ್ಟುವಿಕೆಗಾಗಿ ಮತ್ತು ಲಾಕ್‌ಡೌನ್ ಸಂಪೂರ್ಣವಾಗಿ ಅನುಷ್ಠಾನಗೊಳಿಸಲು ಸಾಕಷ್ಟು ಶ್ರಮವಹಿಸಬೇಕು. ಅಲ್ಲದೇ ಸಾರ್ವಜನಿಕರು ಹೊರಬರದಂತೆ ಜಾಗೃತಿ ಮೂಡಿಸಬೇಕು. ಲಾಕ್‌ಡೌನ್ ಉಲ್ಲಂಘಿಸುವವರ ವಿರುದ್ಧ ಕ್ರಮಕೈಗೊಳ್ಳುವ ಎಲ್ಲಾ ಅಧಿಕಾರ ಹೊಂದಿದ್ದು, ಮುಲಾಇಲ್ಲದೇ ಕ್ರಮಕೈಗೊಳ್ಳಿ ಎಂದು ಹೇಳಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಕಲಬುರಗಿ ವಾಣಿಜ್ಯ ತೆರಿಗೆ ಇಲಾಖೆಯ ಸಹಾಯಕ ಆಯುಕ್ತೆ ನೀಲಗಂಗಾ.ಎಸ್.ಬಬಲಾದ, ನಗರಸಭೆಯ ಪೌರಾಯುಕ್ತ ವೆಂಕಟೇಶ, ತಾಪಂ ಇಓ ಲಕ್ಷ್ಮಣ ಶೃಂಗೇರಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here