ರಾವೂರ ಸಿದ್ದಲಿಂಗೇಶ್ವರ ಜಾತ್ರೆ ರದ್ದು

0
31

ವಾಡಿ: ಇದೇ ಮಾ.೧೬ ರಂದು ನಡೆಯಬೇಕಿದ್ದ ಸುಕ್ಷೇತ್ರ ರಾವೂರು ಗ್ರಾಮದ ಶ್ರೀಸಿದ್ದಲಿಂಗೇಶ್ವರ ಸಂಸ್ಥಾನ ಮಠದ ಜಾತ್ರಾ ಮಹೋತ್ಸವ ಹಾಗೂ ರಥೋತ್ಸವ ರದ್ದು ಪಡಿಸಲಾಗಿದೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಶ್ರೀಮಠದ ಉಸ್ತೂವಾರಿ ಚೆನ್ನಣ್ಣ ಬಾಳಿ ಹಾಗೂ ಮಠದ ವಿದ್ಯಾಭಿವೃದ್ಧಿ ಸಂಸ್ಥೆಯ ಕಾರ್ಯದರ್ಶಿ ಡಾ.ಗುಂಡಣ್ಣ ಬಾಳಿ, ದೇಶವನ್ನು ಕಾಡುತ್ತಿರುವ ಸಾಂಕ್ರಾಮಿಕ ರೋಗ ಕೊರೊನಾ ವೈರಸ್ ವಿರುದ್ಧದ ಸರಕಾರದ ಹೋರಾಟಕ್ಕೆ ಬೆಂಬಲ ಸೂಚಿಸುವ ಮೂಲಕ ಸಹಕಾರ ಭಾವದಿಂದ ಜಾತ್ರೆಯ ನಿಮಿತ್ತ ಪ್ರತಿವರ್ಷ ಆಯೋಜಿಸಲಾಗುತ್ತಿದ್ದ ಪಲ್ಲಕ್ಕಿ ಉತ್ಸವ ಹಾಗೂ ಹದಿನೈದು ದಿನಗಳ ಪ್ರವಚನ ಸೇರಿದಂತೆ ಇತರ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳನ್ನು ಕೈಬಿಡಲಾಗಿದೆ. ಭಕ್ತರು ತಮ್ಮ ತಮ್ಮ ಮನೆಗಳಲ್ಲಿಯೇ ಸರಳವಾಗಿ ಶ್ರೀಸಿದ್ಧಲಿಂಗ ಗುರುವಿನ ಪೂಜೆ ನೆರವೇರಿಸಬೇಕು ಎಂದು ಮನವಿ ಮಾಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here