ಶಾಸಕ ಮತ್ತಿಮುಡು ಅವರಿಂದ ದಿನ ಬಳಕೆ ಸಾಮಾಗ್ರಿಗಳ 500ಕಿಟ್ ವಿತರಣೆ

0
38

ಶಹಾಬಾದ್: ನಗರದ ರಾಮಗಡ ವಾರ್ಡಿನಲ್ಲಿ ಮಾನ್ಯ ಬ‌ಸವರಾಜ ಮತ್ತಿಮೂಡ ಶಾಸಕರು ಬಡವರು, ನಿರ್ಗತಿಕರು ಹಾಗೂ ಅಲೆಮಾರಿ ಜನಾಂಗದವರಿಗೆ ಆಹಾರ ಪದಾರ್ಥಗಳ ಗೋಧಿ ಹಿಟ್ಟು, ತೊಗರಿ ಬೇಳೆ, ಸಕ್ಕರೆ, ಚಹಾಪತ್ತಿ, ಅರಿಶಿಣ ಪುಡಿ, ಮೆಣಸಿನಕಾಯಿ ಪುಡಿ, ಇತ್ಯಾದಿ ಪದಾರ್ಥಗಳು) ಮತ್ತು 1000 ಮಾಸ್ಕಗಳನ್ನು ಹಾಗೂ ‌ಸ್ಯಾನಿಟೈಜರಗಳನ್ನು 500 ಕಿಟ್ ಗಳು ವಿತರಿಸಿದರು.

ಸಂವಿಧಾನ ಶಿಲ್ಪಿ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಜಯಂತಿಯ ದಿನದಂದು ಹಾಗೂ ಪ್ರಧಾನಿ ನರೇಂದ್ರ ಮೋದಿ ಯವರು ಇಂದು ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ ಅಂಶವನ್ನು ಗಮನದಲ್ಲಿಟ್ಟುಕೊಂಡು ಇಂದು ಬಡವರಿಗೆ ಆಹಾರದ ಕಿಟ್ ಗಳನ್ನು ವಿತರಿಸಿರುವದರಲ್ಲಿ ಸಾರ್ಥಕತೆ ಭಾವ ಶಾಸಕರ ಮುಖದಲ್ಲಿ ಎದ್ದು ಕಾಣುತ್ತಿತ್ತು.

Contact Your\'s Advertisement; 9902492681

ಈ ಕ್ಷಣಕ್ಕೆ ಸಾಕ್ಷಿಯಾದವರು, ಶಹಾಬಾದ ಮಂಡಲ ಅಧ್ಯಕ್ಷರಾದ ಅಣವೀರ ಇಂಗಿನಶೆಟ್ಟಿ, ಸುಭಾಶ್ ಜಾಪೂರ, ನಿಂಗಣ್ಣ ಹುಳಗೋಳಕರ, ಅರುಣ್ ಪಟ್ಟಣಕರ, ಪಂಡಿತ್, ಚುನಾಯಿತ ಪ್ರತಿನಿಧಿಗಳು,ಮಾಜಿ ಪುರಸಭಾ ಸದಸ್ಯರು, ಪಕ್ಷದ ಪದಾಧಿಕಾರಿಗಳು, ಹಾಗೂ ಹಿರಿಯ ನಾಯಕರು ಉಪಸ್ಥಿತರಿದ್ದರು.

 

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here