ಗೋದಾಮಿನ ಮೇಲೆ ದಾಳಿ: ಅಪಾರ ಪ್ರಮಾಣದ ಅಕ್ಕಿ ಜಪ್ತಿ

0
34

ಸುರಪುರ: ತಾಲೂಕಿನ ದೇವಿಕೇರಾ ಸಮೀಪದ ಗೊದಾಮು ಒಂದರಲ್ಲಿ ಸಂಗ್ರಹಿಸಿಡಲಾಗಿದ್ದ ಕಾಳ ಸಂತೆಯ ಅಕ್ಕಿಯನ್ನು ತಹಸೀಲ್ದಾರ ನಿಂಗಣ್ಣ ಬಿರಾದಾರ್ ನೇತೃತ್ವದ ತಂಡ ದಾಳಿ ನಡೆಸಿ ವಶಪಡಿಸಿಕೊಂಡಿದ್ದಾರೆ.

ಗುರುವಾರ ರಾತ್ರಿ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ತಹಸೀಲ್ದಾರ ಪೊಲೀಸ್ ಸಿಬ್ಬಂದಿಯೊಂದಿಗೆ ತೆರಳಿ ಗೋದಾಮಿನ ಬೀಗ ತೆರೆಯಿಸಿ ನೋಡಿದಾಗ ಅಕ್ಕಿ ಚೀಲಗಳಿರುವುದನ್ನು ಕಂಡು ತಕ್ಷಣ ಪೊಲೀಸರನ್ನು ನಿಯೋಜಿಸಿ ಬೆಳಗಿನವರೆಗೆ ಕಾಯ್ದಿರಿಸಿ ಬೆಳಿಗ್ಗೆ 8 ಗಂಟೆಗೆ ಗೋದಾಮು ಪುನಃ ತೆರೆಯಿಸಿ ನೋಡಲಾಗಿ,30 ಕೆ.ಜಿಗಿಂತ ಅಧಿಕ ತೂಕವಿರುವ ಸುಮಾರು ಎರಡು ನೂರಕ್ಕು ಹೆಚ್ಚಿನ ಚೀಲಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.

Contact Your\'s Advertisement; 9902492681

ದಾಳಿ ನಡೆಸಿದ ತಂಡದಲ್ಲಿ ಆಹಾರ ನಿರೀಕ್ಷಕ ಅಪ್ಪಯ್ಯ ಹಿರೇಮಠ,ಕಂದಾಯ ನಿರೀಕ್ಷಕ ಗುರುಬಸಪ್ಪ,ಪಿಎಸ್‍ಐ ಚಂದ್ರಶೇಖರ ನಾರಾಯಣಪೂರ,ಸಿಡಿಪಿಒ ಲಾಲ್‍ಸಾಬ್, ಗ್ರಾಮ ಲೆಕ್ಕಿಗರಾದ ಪ್ರದೀಪ ನಾಲ್ವಡೆ,ಮಲ್ಲಮ್ಮ ಹಾಗು ಪೇದೆ ರವಿ ರಾಠೋಡ ಮತ್ತಿತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here