ಶಾಸಕರೇ ಗೋಳಾ(ಕೆ) ಗ್ರಾಮದಲ್ಲೂ ಬಡವರಿದ್ದಾರೆ: ದಲಿತ ಸಂಘಟನೆ

0
79

ಶಹಾಬಾದ: ಕೇವಲ ಶಹಾಬಾದ ನಗರದ ಬಡಾವಣೆಯಲ್ಲೇ ಬಡವರಿಲ್ಲ. ಗೋಳಾ(ಕೆ) ಗ್ರಾಮದಲ್ಲೂ ಬಡವರಿದ್ದಾರೆ. ಅವರಿಗೂ ಆಹಾರ ಕಿಟ್ ವಿತರಿಸಿ ಎಂದು ದಸಂಸ ಜಿಲ್ಲಾ ಸಂಚಾಲಕ ಕೃಷ್ಣಪ್ಪ ಕರಣಿಕ್ ಶಾಸಕ ಬಸವರಾಜ ಮತ್ತಿಮೂಡು ಅವರಿಗೆ ಮನವಿ ಮಾಡಿದ್ದಾರೆ.

ರಾಮಘಡ ಆಶ್ರಯ ಕಾಲೋನಿಯಲ್ಲಿ ಎರಡು ಬಾರಿ ಹಂಚಿಕೆ ಮಾಡಲಾಗಿದೆ.ಅಲ್ಲದೇ ಸರ್ಕಾರದಿಂದ ಬಂದ ಉಚಿತ ಹಾಲು ದುರುಪಯೋಗವಾಗುತ್ತಿದೆ.ಇದ್ದವರಿಗೆ ಆಹಾರ ಕಿಟ್ ಹಾಗೂ ಹಾಲು ವಿತರಿಸಲಾಗುತ್ತಿದೆ.ನಗರದಲ್ಲಿ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಅನೇಕ ಜನರು ಕಡುಬಡವರಿದ್ದಾರೆ.

Contact Your\'s Advertisement; 9902492681

ಲಾಕ್‍ಡೌನ್ ಆಗಿದ್ದಾಗನಿಂದ ಬಡವರಿಗೆ ಕೆಲಸವಿಲ್ಲ. ಕೈಯಲ್ಲಿ ಕಾಸಿಲ್ಲದೇ ಪರದಾಡುತ್ತಿದ್ದಾರೆ. ನಿಜವಾಗಿಯೂ ಇಂತಹವರಿಗೆ ಸಲ್ಲಬೇಕು.ಆದರೆ ಆಗುತ್ತಿರುವುದೇ ಬೇರೆ. ಬಡವರಿಗೆ ಆಹಾರ ಕಿಟ್ ವಿತರಿಸಿದ್ದಾರೆ ಎಂದು ಹೇಳುತ್ತಿದ್ದಾರೆ. ಆದರೆ ನಮ್ಮ ಗ್ರಾಮದಲ್ಲಿ ಇಲ್ಲಿಯವರೆಗೆ ಹಂಚಿಕೆಯಾಗಿಲ್ಲ. ಆದ್ದರಿಂದ ದಯಮಾಡಿ ನಗರ ಸೇರಿದಂತೆ ಗೋಳಾ(ಕೆ) ಗ್ರಾಮದ ಕಡು ಬಡವರಿಗೆ ಆಹಾರ ಧಾನ್ಯಗಳನ್ನು ನೀಡಬೇಕೆಂದು ಆಗ್ರಹಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here