“ಭಾಷಣ ಸಾಕು ವೇತನ ಬೇಕು”: ಗ್ರಾಮ ಪಂಚಾಯತಿ ನೌಕರರ ಸೇರಿ ವಿವಿಧ ಸಂಘಟನೆಗಳ ಮೌನ ಪ್ರತಿಭಟನೆ

0
290

ಕಲಬುರಗಿ: ತಾಲ್ಲೂಕಿನ ಕವಲಗಾ ಬಿ.ಗ್ರಾಮ ಪಂಚಾಯತಿ ಎದುರು ಭಾಷಣ ಸಾಕು ವೇತನ ಬೇಕು ಎಂಬ ಘೋಷಣೆ ಕೂಗಿ ರಾಜ್ಯದ ಗ್ರಾಮ ಪಂಚಾಯತಿ ನೌಕರರ ವೇತನಕ್ಕೆ ಬಾಕಿ ಇರುವ 382 ಕೋಟಿ ರೂಪಾಯಿ ಸರಕಾರದಿಂದ ಬಿಡುಗಡೆಗೆ ಒತ್ತಾಯಿಸಿ ಗ್ರಾಮ ಪಂಚಾಯತಿ ನೌಕರರ ಸಂಘ ಸಿಐಟಿಯು ಸಂಯೋಜಿತ ರಾಜ್ಯ ಸಮೀತಿಯ ತೀರ್ಮಾನದಂತೆ ಮೌನ ಪ್ರತಿಭಟನೆ ಮಾಡಲಾಯಿತು.

ಜಿಲ್ಲಾ ಖಜಾಂಚಿ ಶಿವಾನಂದ ಕವಲಗಾ ಬಿ, ಕವಲಗಾ ಬಿ. ಗ್ರಾಮ ಸಿಬ್ಬಂದಿಗಳಾದ ದೇವಿಂದ್ರ ಮಿಜೇಜಿ, ಗುರುಸಿದ್ದಯ್ಯ ಸ್ವಾಮಿ, ಶರಣು ಫರಹತಾಬಾದ, ಶರಣು ಕವಲಗಿ, ಮಲಕಮ್ಮ ಗೂಳೂರ, ಗಂಗಮ್ಮ, ಬಸವರಾಜ, ಸಿದ್ದು, ಬಾಬು ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here