ಸರಳ ಬಸವ ಜಯಂತಿ ಆಚರಣೆಗೆ: ಡಾ.ಸುಧಾ ಹಾಲಕಾಯಿ ಕರೆ

0
143

ಕಲಬುರಗಿ: ಶ್ರೀ ಬಸವೇಶ್ವರರ 887ನೆಯ ಜಯಂತಿಯನ್ನು ಕೋವಿಡ-19, ಸೋಂಕು ಹರಡಬಾರದೆಂದು ಪ್ರತಿಯೊಬ್ಬ ಬಸವಾಭಿಮಾನಿಯೂ ಈ ವರ್ಷ ಬಸವ ಜಯಂತಿಯನ್ನು ವಿಶ್ವಗುರು ಬಸವಣ್ಣನಲ್ಲಿ ಭಕ್ತಿಪೂರ್ವಕ ಪ್ರಾರ್ಥನೆ ಮಾಡುವುದರೊಂದಿಗೆ ಅರ್ಥಪೂರ್ಣ ಸರಳವಾಗಿ ಆಚರಣೆ ಮಾಡಲು ಅಖಿಲ ಭಾರತ ವೀರಶೈವ ಮಹಾಸಭೆ ಕರೆ ಕೊಟ್ಟಿದೆ ಎಂದು ಅಖಿಲ ಭಾರತ ವೀರಶೈವ ಮಹಾಸಭಾ ಮಹಿಳಾ ಘಟಕ ಜಿಲ್ಲಾ ಅಧ್ಯಕ್ಷೆ ಡಾ.ಸುಧಾ ಹಾಲಕಾಯಿ ತಿಳಿಸಿದ್ದಾರೆ.

ಕೊರೊನಾ ಸಂಪೂರ್ಣ ನಿಯಂತ್ರಣಗೊಳ್ಳಲಿ ಎಂಬುದೇ ಮಹಾಸಭಾದ ಬಯಕೆಯಾಗಿದೆ. ಹೀಗಾಗಿ ಪ್ರಸಕ್ತದ ಬಸವ ಜಯಂತಿಯನ್ನು ಜಿಲ್ಲಾಡಳಿತವೇ ಸಾಂಕೇತಿಕವಾಗಿ
ಆಚರಿಸಲಿ, ಎಂದು ಜಿಲ್ಲಾಧಿಕಾರಿಯವರಿಗೆ ಮನವಿಯನ್ನು ಸಲ್ಲಿಸಲಾಗಿದೆ. ಅಂದಿನ ದಿನ ಮಹಾಸಭಾ ಜಿಲ್ಲಾ ಘಟಕದ ವತಿಯಿಂದ ಲಾಕ್ ಡೌನ್ ನಿಮಿತ್ಯ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ದವಸಧಾನ್ಯಗಳ ಕಿಟ್ ಅನ್ನು ವಿತರಿಸಲು ಸಹ ನಿರ್ಧರಿಸಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here