7 ಜನರಿಗೆ ತಹಸೀಲ್ದಾರ ನಿಂಗಣ್ಣ ಬಿರಾದಾರ್ ಅವರಿಂದ ಬೆಡ್‌ಸೀಟ್‌ ವಿತರಣೆ

0
21

ಸುರಪುರ: ತಾಲೂಕಿನ ಲಿಂಗದಳ್ಳಿ ಗ್ರಾಮದ ಶಾಲೆಯಲ್ಲಿ ತೆರೆಯಲಾದ ಗೃಹ ದಿಗ್ಬಂಧನದಲ್ಲಿ (ಹೋಮ್ ಕ್ವಾರಂಟೈನ್) ಇರಿಸಲಾದ ಹೊರ ರಾಜ್ಯಗಳಿಗೆ ಗುಳೆ ಹೋಗಿಬಂದ ಕೊರೊನಾ ಶಂಕಿತ 7 ಜನರಿಗೆ ತಹಸೀಲ್ದಾರ ನಿಂಗಣ್ಣ ಬಿರಾದಾರ್ ಎಲ್ಲರಿಗೂ ಹೊದಿಕೆ ಮತ್ತು ಜಮಖಾನ್ ಮತ್ತು ಬೆಡ್‌ಸೀಟ್‌ಗಳನ್ನು ವಿತರಿಸಿದರು.ಈ ಸಂದರ್ಭದಲ್ಲಿ ಕ್ವಾರಂಟೈನ್‌ನಲ್ಲಿರುವ ಎಲ್ಲರಿಗೂ ಯಾವುದೇ ಕಾರಣಕ್ಕೂ ಶಾಲೆಯಿಂದ ಹೊರಗೆ ಬರಬೇಡಿ,ಏನಾದರು ಆರೋಗ್ಯದಲ್ಲಿ ಸಮಸ್ಯೆ ಕಂಡು ಬಂದರೆ ತಕ್ಷಣಕ್ಕೆ ವೈದ್ಯರನ್ನು ಕಾಣುವಂತೆ ತಿಳಿಸಿದರು.ತಹಸೀಲ್ ಸಿರಸ್ತೆದಾರ್ ಅಶೋಕ ಸುರಪುರಕರ್,ಭೀಮು ಯಾದವ್ ಇತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here