ಪೌರ ಸಭೆಯ ಆಯುಕ್ತ ವೆಂಕಟೇಶ ಅವರಿಂದ ಕಾರ್ಮಿಕರಿಗೆ ಮಾಸ್ಕ್ ವಿತರಣೆ

0
70

ಶಹಾಬಾದ: ನಗರಸಭೆಯ ಪೌರಕಾರ್ಮಿಕರಿಗೆ ಹಾಗೂ ಎಲ್ಲಾ ಸಿಬ್ಬಂದಿಗಳಿಗೆ ಪೌರ ಸಭೆಯ ಆಯುಕ್ತ ವೆಂಕಟೇಶ ಅವರು ಶುಕ್ರವಾರ ಮಾಸ್ಕ್ ಹಾಗೂ ಸ್ಯಾನಿಟೈಜರ್‍ಗಳನ್ನು ವಿತರಣೆ ಮಾಡಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಪೌರಾಯುಕ್ತ ವೆಂಕಟೇಶ, ಕರೊನಾ ವೈರಸ್ ಎಂದಿನಿಂದ ಪ್ರಾರಂಭವಾಯಿತೋ ಅಂದಿನಿಂದ ನಮ್ಮ ನಗರಸಭೆಯ ಪೌರಾಯುಕ್ತರು ತಮ್ಮ ಆರೋಗ್ಯ ಬಗ್ಗೆ ಚಿಂತಿಸದೇ ಜನರ ಆರೋಗ್ಯ ಕಾಪಾಡಲು ಅವಿರತವಾಗಿ ದುಡಿಯುತ್ತಿದ್ದಾರೆ.ಅವರಿಗೆ ವೈರಸ್ ತಗುಲದಂತೆ ಮುಂಜಾಗೃತ ಕ್ರಮವಾಗಿ ಮಾಸ್ಕ್ ಹಾಗೂ ಸ್ಯಾನಿಟೈಜರ್ ವಿತರಣೆ ಮಾಡಿದ್ದೆವೆ. ಅವರ ಸೇವೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಪೌರಕಾರ್ಮಿಕರು ಮಾಸ್ಕ್, ಕೈಚೀಲಗಳನ್ನು ಹಾಕಿಕೊಂಡು ಕೆಲಸ ಮಾಡಿ. ನಂತರ ಕೈಗಳಿಗೆ ಸ್ಯಾನಿಟೈಜರ್ ಹಚ್ಚಿಕೊಳ್ಳಿ. ಸೋಪ್‍ನಿಂದ ಚೆನ್ನಾಗಿ ಕೈತೊಳೆದುಕೊಳ್ಳಿ ಎಂದು ತಿಳಿಸಿದರು.

Contact Your\'s Advertisement; 9902492681

ಆರೋಗ್ಯ ನಿರೀಕ್ಷಕ ಶಿವರಾಜಕುಮಾರ, ಕಿರಿಯ ಆರೋಗ್ಯ ನಿರೀಕ್ಷಕ ರಾಜೇಶ, ಶರಣು, ಹುಣೇಶ, ಅನೀಲ,ಈರಣ್ಣ ಕುರಿ, ಹಣಮಂತ ಪವಾರ ಸೇರಿದಂತೆ ಅನೇಕ ಪೌರಾಕಾರ್ಮಿಕರು ಹಾಗೂ ಸಿಬ್ಬಂದಿ ವರ್ಗದವರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here