ಜಾಗತಿಕ ಲಿಂಗಾಯತ ಮಹಾಸಭಾದಿಂದ ಬಸವ ಜಯಂತಿ ಆಚರಣೆ

0
47

ಶಹಾಬಾದ: ರಾಜಾಶಾಹಿ ವ್ಯವಸ್ಥೆ ಮತ್ತು ಜಾತೀಯತೆ ತಾಂಡವವಾಡುತ್ತಿರುವ ಸಂದರ್ಭದಲ್ಲಿ ಸಮಾಜದ ಬೇರುರಿದ್ದ ಜಾತೀಯತೆ, ಅಂಧಕಾರ, ಮೌಡ್ಯತೆ, ಕಂದಾಚಾರವನ್ನು ಹೋಗಲಾಡಿಸಲು ಅರಸನ ಆಡಳಿತದ ವಿರುದ್ಧ ದಿಟ್ಟ ಎದೆಗಾರಿಕೆ ತೋರಿದವರು ಅಣ್ಣ ಬಸವಣ್ಣನವರು ಎಂದು ತಹಸೀಲ್ದಾರ ಸುರೇಶ ವರ್ಮಾ ಹೇಳಿದರು.

ಅವರು ರವಿವಾರ ನಗರದ ಬಸವೇಶ್ವರ ವೃತ್ತದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾದಿಂದ ಆಯೋಜಿಸಲಾದ ಬಸವ ಜಯಂತಿ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡಿದರು.

Contact Your\'s Advertisement; 9902492681

ರಾಜಾಶಾಹಿ ವ್ಯವಸ್ಥೆಯಲ್ಲಿ ಮಂತ್ರಿಯಾಗಿ ಕೆಲಸ ನಿರ್ವಹಿಸುತ್ತ, ಸಮಾಜದಲ್ಲಿ ಮೇಳು-ಕೀಳು ಭಾವನೆಯನ್ನು ತೊಡೆದು ಹಾಕಲು ಅರಸನ ವಿರುದ್ಧ ಅಂದು ಅಂತರ್ಜಾತಿ ವಿವಾಹ ಮಾಡಿದ ಬಸವಣ್ಣನವರು ಪ್ರಪಂಚದ ಮೊಟ್ಟ ದಾರ್ಶನಿಕ ಪುರುಷ. ಜ್ಯೋತಿ ತಾನು ಬೆಳುಗುವುದಲ್ಲದೇ, ಇತರರಿಗೆ ಬೆಳಕು ಕೊಟ್ಟ ರೀತಿಯಲ್ಲಿ ಕುಲಕ್ಕೊಬ್ಬ ಶರಣರನ್ನು ಸೃಷ್ಠಿಸಿ, ಆಧ್ಯಾತ್ಮಿಕ ಸಂಸತ್ತು ಅನುಭವ ಮಂಟಪವನ್ನು ರೂಪಿಸಿದವರು.

ಪೌರಾಯುಕ್ತ ವೆಂಕಟೇಶ ಮಾತನಾಡಿ, ೧೨ನೇ ಶತಮಾನದಲ್ಲಿಯೇ ಸರ್ವರಿಗೂ ಸಮಪಾಲು, ಸಮಬಾಳು ಬಿತ್ತಿದಂಥ ಬೀಜ ಇಂದು ವಿಶ್ವದಾದ್ಯಂತ ಪಸರಿಸಿದೆ. ಅವರು ಎಂದಿಗೂ ಕೇವಲ ಹೇಳುವಂತವರಾಗಿರಲಿಲ್ಲ. ನುಡಿದಂತೆ ನಡೆದವರು.ವಿಪ್ರ ಸಮಾಜದಲ್ಲಿ ಹುಟ್ಟಿ ಅಲ್ಲಿನ ಗೊಡ್ಡು ಆಚರಣೆಗಳನ್ನು ತೀರಸ್ಕರಿಸಿ ಲಿಂಗಾಯತ ಧರ್ಮವನ್ನು ಕೊಟ್ಟರು.ಜಗತ್ತು ಇಂದು ಬಸವಣ್ಣವರನ್ನು ಒಪ್ಪಿಕೊಂಡಿದೆ ಮತ್ತು ಅಪ್ಪಿಕೊಂಡಿದೆ.

ಜಾಗತಿಕ ಲಿಂಗಾಯತ ಮಹಾಸಭಾದ ತಾಲೂಕಾಧ್ಯಕ್ಷ ವೈಜನಾಥ ಹುಗ್ಗಿ, ಅಣವೀರ ಇಂಗಿನಶೆಟ್ಟಿ, ಸಾಹೇಬಗೌಡ ಬೋಗುಂಡಿ, ಶರಣು ಪಗಲಾಪೂರ, ಗಿರಿರಾಜ ಪವಾರ,ಸಾಯಬಣ್ಣ, ಗಿರಿಮಲ್ಲಪ್ಪ ವಸಂಗ, ಕುಪೇಂದ್ರ ತುಪ್ಪದ್,ಮಹಾಂತೇಶ ಅವಂಟಿ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here