ಕುಂಬಾರಪೇಟೆಯಲ್ಲಿನ ಜೋಗೆರ್ ಕುಟುಂಬಗಳಿಗೆ ಅಗತ್ಯ ಸಾಮಾಗ್ರಿಗಳ ವಿತರಣೆ

0
82

ಸುರಪುರ: ನಗರದ ಕುಂಬಾರಪೇಟ ಬಳಿಯಿರುವ ನಾಲ್ಕು ಜೋಗೇರ ಕುಟುಂಬಗಳಿಗೆ ತಹಸೀಲ್ದಾರ್ ನಿಂಗಣ್ಣ ಬಿರಾದಾರ್ ಆಹಾರ ಧಾನ್ಯಗಳ ಕಿಟ್‌ಗಳನ್ನು ವಿತರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ತಾಲೂಕಿನಲ್ಲಿ ಲಾಕ್ ಡೌನನಿಂದ ತೊಂದರೆಗೀಡಾದ ಹಲವು ಕುಟುಂಬಗಳಿಗೆ ಸಾರ್ವಜನಿಕರು ಹಾಗೂ ದಾನಿಗಳು ಸ್ವಯಂ ಪ್ರೇರಣೆಯಿಂದ ಆಹಾರ ಧಾನ್ಯದ ಕಿಟ್ ಗಳನ್ನು ಮತ್ತು ಆಹಾರವನ್ನು ವಿತರಿಸುತ್ತಿದ್ದಾರೆ ಮತ್ತು ಇದರೊಂದಿಗೆ ತಾಲೂಕು ಆಡಳಿತದಿಂದ ಆಹಾರ ಧಾನ್ಯದ ಕಿಟ್ ಗಳನ್ನು ವಿತರಿಸಿದೆ ಮತ್ತು ವಲಸೆ ಕಾರ್ಮಿಕರುಗಳಿಗೆ ಸರ್ಕಾರಿ ಶಾಲೆಗಳಲ್ಲಿ ವ್ಯವಸ್ಥೆ ಕಲ್ಪಸಲಾಗಿದೆ ಎಂದು ತಿಳಿಸಿದರು.

Contact Your\'s Advertisement; 9902492681

ದೇಶದಲ್ಲಿ ಲಾಕ್ ಡೌನಿಂದಾಗಿ ದಿನಗೂಲಿ ಮಾಡಿ ಬುಕುವ ಜನರಿಗೆ ಊಟದ ತೊಂದರೆಯಾಗಬಾರದೆಂದು ಸರ್ಕಾರದಿಂದನೆ ಆಹಾರ ಧಾನ್ಯದ ಕಿಟ್ ಗಳನ್ನು ವಿತರಿಸಲಾಗುತ್ತಿದೆ ಹಾಗೂ ತಾಲೂಕುನಲ್ಲಿ ನಮ್ಮ ಸಂಪರ್ಕದಲ್ಲಿರುವ ಬಹುತೇಕ ದಿನಗೂಲು ಅಶಕ್ತ ಕುಟುಂಬಗಳಿಗೆ ಕಿಟ್‌ಗಳನ್ನು ವಿತರಿಸಲಾಗಿದೆ,ತಾಲೂಕಿನ ಯಾವುದೇ ಕುಟುಂಬಗಳು ಅಗತ್ಯ ವಸ್ತುಗಳ ತೊಂದರೆಯಲ್ಲಿದ್ದರೆ ತಕ್ಷಣಕ್ಕೆ ತಾಲೂಕು ಆಡಳಿತದ ಗಮನಕ್ಕೆ ತಂದಲ್ಲಿ ಅವರ ಸಮಸ್ಯೆಗಳಿಗೆ ಸ್ಪಂಧಿಸಲಾಗುವುದು ಎಂದು ತಿಳಿಸಿ,ನಂತರ ಜೋಗೆರ ೬ ಕುಟುಂಬಗಳಿಗೆ ಕಿಟ್ ವಿತರಿಸಿದರು.

ಈ ಸಂದರ್ಭದಲ್ಲಿ ಗ್ರಾಮ ಲೆಕ್ಕಿಗ ಪ್ರದೀಪ ನಾಲ್ವಡೆ, ಜೋಗೆರಾ ಕುಟುಂಬದ ಅಂಬಾಜಿ, ಮುಕುಂದ ಸೇರಿದಂತೆ ಇನ್ನಿತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here