ಬದುಕಿದ್ದ ವೃದ್ಧರಿಗೆ ಸತ್ತಿದ್ದಾರೆಂದು ಪಿಂಚಣಿ ಬಂದ್: ಕ್ರಮಕ್ಕೆ ಪಿಂಚಣಿದಾರರಿಂದ ಪ್ರತಿಭಟನೆ

0
43

ಕಲಬುರಗಿ: ವಿಧವಾ ವೇತನ, ವೃಧ್ಯಾಪ ವೇತನ, ಸಂಧ್ಯಾ ಸುರಕ್ಷಾ ವೇತನವನ್ನು 4 ತಿಂಗಳಿನಿಂದ ಬಂದ್ ಆಗಿ ಬಡವರ ಹೊಟ್ಟೆಯ ಮೇಲೆ ಬರೆ ಎಳೆದು ನಿರ್ಗತಿರಿಗೆ ಒಂದೊತ್ತಿನ ಗಂಜಿಗೂ ಕೂಡ ಗತಿ ಇಲ್ಲದಂತಹ ಸ್ಥಿತಿ ಜಿಲ್ಲೆಯ ಮೊಘಾ ಗ್ರಾಮದಲ್ಲಿ ನಡೆದಿದೆ.

ಒಟ್ಟು 150 ಫಲಾನುಭವಿಗಳು ಇದ್ದು, ಹಿರಿಯ ನಾಗರಿಕರು ಜೀವಂತವಿದ್ದರೂ ಸಹ ಸತ್ತಿದ್ದಾರೆ ಎಂದು ಸುಳ್ಳು ವರದಿ ಹಾಕಿ ವೇತನವನ್ನು ಬಂದ್ ಮಾಡಿದ್ದಾರೆ ಎಂದು ಪಿಂಚಣಿದಾರರು ಕರ್ನಾಟಕ ಪ್ರಾಂತ ರೈತ ಸಂಘಟನೆ ಜಿಲ್ಲಾ ಅಧ್ಯಕ್ಷರಾದ ಶರಣಬಸಪ್ಪ ಮಮಶೇಟಿ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಆರೋಪಿಸಿದ್ದಾರೆ.

Contact Your\'s Advertisement; 9902492681

ಪ್ರತಿ ತಿಂಗಳ ಪಿಂಚಣಿ ಹಣ ಬಂದ್ ಮಾಡಿ, ಕೇಳಲು ಹೋದರಿಗೆ ಅಧಿಕಾರಿ ಸಿಬ್ಬಂದಿಗಳು ಉಡಾಫೆ ಉತ್ತರ ನೀಡುತ್ತಿದ್ದಾರೆ ಪ್ರತಿಭಟನೆ ನಿರತರು ಆಕ್ರೋಶ ವ್ಯಕ್ತಪಡಿಸಿದರು.

ಕೊರೊನ ಎಫೆಕ್ಟನ್ನು ಬಡವರಿಗೆ, ನಿರ್ಗತಿಕರಿಗೆ ಕೂಲಿಕಾರ್ಮಿಕರು ಎದುರಿಸಿ ಕೆಲಸವಿಲ್ಲದೇ ಪರದಾಡುತ್ತಿದ್ದಾರೆ. ಗ್ರಾಮೀಣ ಪ್ರದೇಶದ ಜನರು ಸರಕಾರದ ವಿರುದ್ಧ ಹಿಡಿಶಾಪ ಹಾಕುವ ವಾತವರಣ ನಿರ್ಮಾಣವಾಗಿದ್ದು, ಈ ಕೂಡಲೇ ಅಧಿಕಾರಿಗಳು ಮಧ್ಯಸ್ಥಿತಿಕೆ ವಹಿಸಿ ಫಲಾನುಭವಿಗಳಿಗೆ ಪಿಂಚಣಿ ಹಣ ಪಾವತಿಸಬೇಕೆಂದು ಮಮಶೇಟಿ ಈ ಸಂದರ್ಭದಲ್ಲಿ ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಗುರುನಂದೇಶ ಕೊಣಿನ, ತುಕಾರಾಮ ಮೋಘಾ, ಗುರುಲಿಂಗಪ್ಪಾ ಪಾಟೀಲ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here