ಸಾಮಾಜಿಕ ಅಂತರ ಕಾಯ್ದುಕೊಂಡು ಕೆಲಸ ನಿರ್ವಹಿಸಿ

0
32

ಚಿತ್ತಾಪುರ: ಕೊರೊನ್ ವೈರಸ್ ಹಿನ್ನೆಲೆ ತಮ್ಮ ಆರೋಗ್ಯದ ಹಿತದೃಷ್ಟಿಯಿಂದ ಎಚ್ಚರವಹಿಸಿ ಸಾಮಾಜಿಕ ಅಂತರ ಕಾಯ್ದುಕೊಂಡು ಕೆಲಸದಲ್ಲಿ ಪಾಲ್ಗೊಳ್ಳಿ ಎಂದು ತಾಲೂಕ ಪಂಚಾಯತ್ ಅಧ್ಯಕ್ಷ ಜಗದೇವ ರೆಡ್ಡಿ ಪೊಲೀಸ್ ಪಾಟೀಲ್ ಕೂಲಿಕಾರರಿಗೆ ಸೂಚಿಸಿದರು

ತಾಲೂಕಿನ ಸಾತನೂರು ಗ್ರಾಮಪಂಚಾಯತ್ ವ್ಯಾಪ್ತಿಯ ಹೊಸೂರು ಗ್ರಾಮದಲ್ಲಿ ನರೇಗಾ ಯೋಜನೆ ಅಡಿ ಬದು ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಇಂತಹ ಸಂಕಷ್ಟ ಸಮಯದಲ್ಲಿ ಉದ್ಯೋಗಖಾತ್ರಿ ನಿಮಗೆ ಸಹಕಾರಿ ಆಗುತ್ತದೆ ಯಾವುದೇ ಕಾಲಕ್ಕೂ ಧೈರ್ಯಗೆಡದೆ ಕೆಲಸ ಮಾಡಿ ಸರ್ಕಾರ ನಿಮ್ಮ ನೆರವಿಗೆ ಇದೆ ಎಂದು ಹೇಳಿದರು

Contact Your\'s Advertisement; 9902492681

ತಾಲೂಕ್ ಪಂಚಾಯತ್ ಇಓ ಅನಿತಾ ಕೆ ಮಾತನಾಡಿ ಉದ್ಯೋಗ ಖಾತ್ರಿ ಯೋಜನೆ ಅಡಿ ಪ್ರತಿಯೊಬ್ಬ ಕೂಲಿಕಾರ್ಮಿಕರಿಗೆ ದಿನಕ್ಕೆ ರೂಪಾಯಿ 275/- ಸಿಗುತ್ತಿದೆ ಇದರ ಸದುಪಯೋಗ ಪಡೆದುಕೊಳ್ಳಿ ಎಂದರು. ಇದರಿಂದ ತೃಪ್ತಿಯಾದ ಕೂಲಿಕಾರರು (ಕೋವಿಡ್-19) ಈ ಸಂಕಷ್ಟ ಸಮಯದಲ್ಲಿ ಉದ್ಯೋಗಖಾತ್ರಿ ಯೋಜನೆ ಅಡಿ ನೀಡುವ ಕೆಲಸವೇ ನಮಗೆ ಆಸರೆಯಾಗಿದೆ, ಎಂದು ಬಹುತೇಕ ಕೂಲಿಕಾರರು ಸಂತಸ ವ್ಯಕ್ತಪಡಿಸಿದರು.

ಈ ವೇಳೆಯಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ನಾಗಮ್ಮ ಕರದಾಳ, ಗ್ರಾಮ ಪಂಚಾಯತ್ ಪಿಡಿಒ ಸೂರ್ಯಕಾಂತ್, ತಾಲೂಕ್ ಪಂಚಾಯತ್ ಮ್ಯಾನೇಜರ್ ಅಮೃತ, ಇದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here