ಕುಡಿಯುವ ನೀರಿಗಾಗಿ ಹತ್ತಿಗೂಡುರ ಗ್ರಾಮ ಪಂಚಾಯಿತಿಗೆ ಮುತ್ತಿಗೆ

0
32

ಶಹಾಪುರ : ಖಾಲಿ ಕೊಡಗಳೊಂದಿಗೆ ಕುಡಿಯುವ ನೀರಿಗಾಗಿ ದಿಢೀರನೆ ಹತ್ತಿಗೂಡುರ ಗ್ರಾಮ ಪಂಚಾಯಿತಿಗೆ ಮುತ್ತಿಗೆ ಹಾಕಿ ಪ್ರತಿಭಟಿನೆ ಹಮ್ಮಿಕೊಳ್ಳಲಾಗಿತ್ತು.

ಕೂಡಲೇ ಪ್ರತಿಭಟನಾ ಸ್ಥಳಕ್ಕೆ ಧಾವಿಸಿದ ಅಧಿಕಾರಿಗಳು ಕುಡಿಯುವ ನೀರಿನ ವ್ಯವಸ್ಥೆ ಮಾಡುವ ಭರವಸೆಯನ್ನು ನೀಡಿ ಪ್ರತಿಭಟನೆ ಹಿಂಪಡೆಯುವಂತೆ ಮನವಿ ಮಾಡಿಕೊಂಡರು.ಬೇಸಿಗೆಯಾಗಿರುವುದರಿಂದ ಹತ್ತಿಗೂಡುರ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದ್ದು ಈಗಾಗಲೇ ಒಂದು ವಾರದ ಮುಂಚಿತವಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ಈ ಸಮಸ್ಯೆಗಳ ಕುರಿತು ಮನವರಿಕೆ ಮಾಡಲಾಗಿತ್ತು. ಆದರೂ ಇಲ್ಲಿಯವರೆಗೆ ಯಾವುದೇ ರೀತಿಯ ಪ್ರಯೋಜನೆಯಾಗಿಲ್ಲ.

Contact Your\'s Advertisement; 9902492681

ಇಂದು ಅಧಿಕಾರಿಗಳ ಬೇಜವಾಬ್ದಾರಿತನದಿಂದ ಖಾಲಿ ಕೊಡಗಳೊಂದಿಗೆ ಗ್ರಾಮ ಪಂಚಾಯಿತಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಲಾಯಿತು ಎಂದು ಜಿಲ್ಲಾ ದಲಿತ ಸಂಘರ್ಷ ಸಮಿತಿಯ ಸಂಚಾಲಕ ಶರಣುರಡ್ಡಿ ಹತ್ತಿಗೂಡೂರ ಹೇಳಿದರು.ಈ ಸಂದರ್ಭದಲ್ಲಿ ತಿಪ್ಪಣ್ಣ ಗಂಟಿ ಶೇಖಪ್ಪ ಹೊಸಮನಿ ಹಣಮಂತ ಹೊಸಮನಿ ಬಾಗಪ್ಪ ರತ್ತಾಳ ರಾಜಪ್ಪ ಹೊಸಮನಿ ಮಲ್ಲಪ್ಪ ಕನಕಗಿರಿ ಸುಭಾಷ್ ಕನ್ಯಾ ಕೊಳ್ಳೂರ ಶರಣು ಗ್ಯಾಂಗಿನ ಮಲ್ಲಪ್ಪ ಗೌಡಿ ಮಾನಪ್ಪ ಯರಗಲ್ ಶರಣಪ್ಪ ಗ್ಯಾಂಗ್ ದೇವಪ್ಪ ರತ್ತಾಳ ಹೊನ್ನಪ್ಪ ರವಿ ಕನಕಗಿರಿ ಇತರರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here