ಸ್ವಾಮೀಜಿ ಮೇಲಿನ ಹಲ್ಲೆಗೆ ನಾಗಲಿಂಗಯ್ಯ ಖಂಡನೆ

2
187

ಕಲಬುರಗಿ : ಕಲಬುರಗಿ ಜಿಲ್ಲೆಯ ಅಫಜಲೂರ ತಾಲೂಕಿನ ರೇವೂರ (ಬಿ) ಗ್ರಾಮದ ಪೂಜ್ಯ ಶ್ರೀ ಶಿವಾನಂದ ಸ್ವಾಮೀಜಿಯವರ ಮೇಲೆ ನಡೆದ ಹಲ್ಲೆ ಪ್ರಕರಣದ ಕುರಿತು ಉನ್ನತ ಮಟ್ಟದ ತನಿಖೆ ನಡೆಸುವಂತೆ ಅಖಿಲ ಭಾರತ ವೀರಶೈವ ಮಹಾಸಭೆಯ ಕಲಬುರಗಿ ಜಿಲ್ಲಾ ಘಟಕದ ಕಾರ್ಯಕಾರಿ ಸಮಿತಿ ಸದಸ್ಯ ನಾಗಲಿಂಗಯ್ಯ ಮಠಪತಿ ಸಕರ್ಾರಕ್ಕೆ ಒತ್ತಾಯಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆಯನ್ನು ನೀಡಿರುವ ಅವರು ಹಲ್ಲೆ ನಡೆಸಿರುವ ಪೇದೆ ಶರಣಗೌಡ ಪಾಟೀಲ ರವರನ್ನು ಈಗಾಗಲೇ ಕಲಬುರಗಿ ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿಗಳಾದ ಶ್ರೀ ಯಡಾ ಮಾಟರ್ಿನ್ ಮರ್ಬನ್ಯಾಂಗ್ ರವರು ಅಮಾನತ್ತುಗೊಳಿಸಿ ಆದೇಶ ಹೊರಡಿಸಿರುವುದು ಸ್ವಾಗತಾರ್ಹ ವಾಗಿದ್ದು ಆದರೆ ಪ್ರಕರಣದ ಬಗ್ಗೆ ಸಂಪೂರ್ಣವಾದ ತನಿಖೆ ಅಗತ್ಯವಿರುವುದರಿಂದ ಮುಗ್ಧ ಅಮಾಯಕ ಮತ್ತು ಅಂಗವಿಕಲರಾಗಿರುವ ಸ್ವಾಮೀಜಿಯವರ ಮೇಲೆ ಹಲ್ಲೆ ಸ್ಪಷ್ಟವಾಗಿ ಮಾನವ ಹಕ್ಕುಗಳ ಉಲ್ಲಂಘನೆಯಾಗಿದ್ದು, ಈ ಕುರಿತು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು ಸಲ್ಲಿಸಲಾಗುವುದು ಯಾವ ತಪ್ಪು ಮಾಡದ ಸ್ವಾಮೀಜಿಯವರ ಮೇಲೆ ಮಾರಣಾಂತಿಕ ಹಲ್ಲೆ ಆದರೂ ಸಹ ಅಫಜಲಪೂರ ಸಿ.ಪಿ.ಐ. ರವರಾಗಲಿ, ಆಳಂದ ಡಿ.ವೈ.ಎಸ್.ಪಿ. ರವರಾಗಲಿ ಕ್ರಮ ಕೈಗೊಳ್ಳದೇ ಉದಾಸೀನತೆ ತೋರಿಸಿರುವುದು ಬೇಸರದ ಸಂಗತಿಯಾಗಿದ್ದು, ರಕ್ಷಕರೇ ಈ ರೀತಿ ದುಂಡಾವರ್ತನೆ ಮಾಡಿದರೆ ಹೇಗೆ ಎಂದು ಪ್ರಶ್ನಿಸಿರುವ ಅವರು ಒಂದು ವೇಳೆ ಸ್ವಾಮೀಜಿ ತಪ್ಪು ಮಾಡಿದರೆ ಪ್ರಕರಣ ದಾಖಲಿಸಿ ಕಾನೂನು ರೀತಿ ಕ್ರಮ ಕೈಗೊಳ್ಳುವುದು ಬಿಟ್ಟು ಪೇದೆ ಮನಸೋ ಇಚ್ಛೆ ಹೊಡೆದಿರುವುದು ಖಂಡನೀಯವಾಗಿದ್ದು ನಾವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬದುಕುತ್ತಿದ್ದೇವೆ ಎನ್ನುವುದು ಇಂತಹ ಮನಸ್ಸುಗಳು ಅರ್ಥ ಮಾಡಿಕೊಳ್ಳಬೇಕು.

Contact Your\'s Advertisement; 9902492681

ಇದು ರಾಜಶಾಹಿ ವ್ಯವಸ್ಥೆ ಅಲ್ಲ. ಪ್ರಕರಣದ ಹಿಂದೆ ಕಾಣದ ಕೈಗಳ ಕೈವಾಡವಿರುವ ಶಂಕೆ ಇದ್ದು ಪ್ರಕರಣವನ್ನು ಉನ್ನತ ಮಟ್ಟದ ತನಿಖೆ ಕೈಗೊಳ್ಳುವಂತೆ ಕೋರಿ ರೇವೂರ (ಬಿ) ಪೊಲೀಸ ಠಾಣೆಯ ಪಿ.ಎಸ್.ಐ., ಅಫಜಲಪೂರ ಸಿ.ಪಿ.ಐ. ಹಾಗೂ ಆಳಂದ ಡಿ.ವೈ.ಎಸ್.ಪಿ. ಸೇರಿದಂತೆ ಸಂಬಂಧಿಸಿದ ಅಧಿಕಾರಿಗಳನ್ನೂ ಸಹ ವಿಚಾರಣೆಗೊಳಪಡಿಸುವಂತೆ ಮಂಗಳವಾರ ಬೆಂಗಳೂರಿನಲ್ಲಿ ರಾಜ್ಯದ ಗೃಹ ಸಚಿವರಾದ ಸನ್ಮಾನ್ಯ ಶ್ರೀ ಬಸವರಾಜ ಬೊಮ್ಮಾಯಿಯವರಿಗೆ ನಿಯೋಗದ ಮೂಲಕ ಭೇಟಿಯಾಗಿ ಮನವಿ ಸಲ್ಲಿಸಲಾಗುವುದೆಂದು ಮಠಪತಿ ತಿಳಿಸಿದ್ದಾರೆ.

2 ಕಾಮೆಂಟ್ಗಳನ್ನು

  1. Мы можем предоставить любую запчасть взжатый срок непосредственно в пункт выдачи рынок автозапчастей : надежные автозапчасти.
    Кроме стремления предоставить большой комплект авто аксессуаров, наша фирма постоянно работа ведется над возможностью легких и быстрых закупок у нас в магазине. Из-за ассортимента характеристик и вариантов авто каждой марки, мы тут завели пошаговую схему заявки. Таковым методом, мы хотим избежать закупок и упущений неудобных автозапчастей.
    Выберите у нас авто завпчасти и дополнительно получайте скидку в цене на следующий заказ!

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here