ಪರಿಸರ ಕಾಪಾಡುವುದು ಎಲ್ಲರ ಕರ್ತವ್ಯ: ದರ್ಶನಾಪುರ

0
96

ಶಹಾಪುರ: ಪ್ರಸ್ತುತ ದಿನಮಾನಗಳಲ್ಲಿ ಪರಿಸರ ಉಳಿಸಿ ಬೆಳೆಸಿ ಕಾಪಾಡಿಕೊಂಡು ಹೋಗುವುದು ಎಲ್ಲರ ಕರ್ತವ್ಯವಾಗಿದೆ ಎಂದು ಶಾಸಕರಾದ ಶರಣಬಸಪ್ಪಗೌಡ ದರ್ಶನಾಪುರ ಹೇಳಿದರು.

Contact Your\'s Advertisement; 9902492681

ತಾಲೂಕಿನ ಭೀಮರಾಯನ ಗುಡಿಯ ಶಿವಮಂದಿರದ ಆವರಣದಲ್ಲಿ ಹಮ್ಮಿಕೊಂಡಿರುವ ಪರಿಸರ ದಿನಾಚರಣೆ ಅಂಗವಾಗಿ ಸಸಿಗಳನ್ನು ನೆಟ್ಟು ಮಾತನಾಡಿದರು.ಮನುಷ್ಯನ ದುರಾಸೆಯಿಂದ ಗಿಡ ಮರ ಬೆಟ್ಟಗಳು ಕಡಿಯುತ್ತಿದ್ದಾನೆ ಆದ್ದರಿಂದ ಜಗತ್ತಿನ ತಾಪಮಾನ ಆಗಾಗ ಏರುಪೇರು ಆಗುತ್ತಿದೆ ಇದೇ ರೀತಿಯಾದರೆ ಮುಂಬರುವ ದಿನಗಳಲ್ಲಿ ಮಾನವ ಸಂಕುಲಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ತಾಲ್ಲೂಕು ದಂಡಾಧಿಕಾರಿಗಳಾದ ಜಗನ್ನಾಥ್ ರೆಡ್ಡಿ ಕಾಂಗ್ರೆಸ್ ಮುಖಂಡರಾದ ಬಸವರಾಜಪ್ಪಗೌಡ ಗೋಗಿ ಶಿವಶರಣ ಇಟಗಿ,ಅರಣ್ಯ ಇಲಾಖೆ ಅಧಿಕಾರಿಗಳಾದ ಐ.ಬಿ.ಹೂಗಾರ ಹಾಗೂ ಇತರರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here