ಆದರ್ಶ ಕನ್ನಡ ಬಳಗದ ರಾಷ್ಟ್ರ ಮಟ್ಟದ ಅಂತರ್ಜಾಲ ಗಾಯನ ಸ್ಪರ್ಧೆ ಮಮತಾಜ ಅಣ್ಣಿಗೇರಿ, ಲೀಸಾ ಕೊಕ್ಕರ್ಣಿ ಪ್ರಥಮ

0
129

ಸೊಲ್ಲಾಪುರ :ಕೊರೊನಾದಿಂದ ಭಾರತ ಲಾಕ್ ಡೌನ್ ಮಾಡಲಾಗಿದ್ದು, ಇದರಿಂದ ಸಾಹಿತ್ಯ, ಸಾಂಸ್ಕೃತಿಕ, ರಂಗಭೂಮಿ ಹಾಗೂ ಸಂಗೀತ ಸೇರಿದಂತೆ ಅನೇಕ ಕಲಾವಿದರ ಬದುಕನ್ನು ಕಸಿದುಕೊಂಡಿದೆ. ಹೀಗಾಗಿ ಆದರ್ಶ ಕನ್ನಡ ಬಳಗವು ರಾಷ್ಟ್ರ ಮಟ್ಟದ ಅಂತರ್ಜಾಲ ಗಾಯನ ಸ್ಪರ್ಧೆ ಏರ್ಪಡಿಸಿದ್ದು, ಈ ಸ್ಪರ್ಧೆಯಲ್ಲಿ ಹಿರಿಯರ ವಿಭಾಗದಲ್ಲಿ ಮಮತಾಜಿ ಅಣ್ಣಿಗೇರಿ ಮತ್ತು ಕಿರಿಯರ ವಿಭಾಗದಲ್ಲಿ ಲೀಸಾ ಕೊಕ್ಕರಣಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾರೆ.

ಗಡಿನಾಡಿನ ಕನ್ನಡ ಹೋರಾಟಗಾರ ಮತ್ತು ಸಮಾಜ ಸೇವಕರಾದ ಡಾ|| ಆರ್.ಕೆ.ಪಾಟೀಲರ ಪ್ರಾಯೋಜಕತ್ವದಲ್ಲಿ ರಾಷ್ಟ್ರ ಮಟ್ಟದ ಅಂತರ್ಜಾಲ ಗಾಯನ ಸ್ಪರ್ಧೆಗಾಗಿ ಆರ್ಥಿಕ ಸಹಕಾರ ನೀಡಿದ್ದಾರೆ. ಹಿರಿಯರ ವಿಭಾಗದಲ್ಲಿ ಪ್ರಥಮ 5 ಸಾವಿರ ರೂ. ದ್ವೀತಿಯ 3 ಸಾವಿರ ರೂ. ತೃತೀಯ 2 ಸಾವಿರ ರೂ ಮತ್ತು ಕಿರಿಯರ ವಿಭಾಗದಲ್ಲಿ ಪ್ರಥಮ 5 ಸಾವಿರ ರೂ. ದ್ವೀತಿಯ 3 ಸಾವಿರ ರೂ. ತೃತೀಯ 2 ಸಾವಿರ ರೂ. ಸೇರಿದಂತೆ ಸ್ಪರ್ಧೆಯಲ್ಲಿ ವಿಜೇತರಾದ ಅಭ್ಯರ್ಥಿಗಳಿಗೆ ಬಹುಮಾನ ನೀಡಿ ಲಾಕ್‍ಡೌನ್ ಮುಗಿದ ಬಳಿಕ ಅವರನ್ನು ಗೌರವಿಸಲಾಗುವುದು ಎಂದು ಆದರ್ಶ ಕನ್ನಡ ಬಳಗದ ಅಧ್ಯಕ್ಷ ಮಲಿಕಜಾನ್ ಶೇಖ್ ಹೇಳಿದರು.

Contact Your\'s Advertisement; 9902492681

ಲಾಕಡೌನ್ ಸಮಯದಲ್ಲಿ ಗಾಯನ ಕಲೆಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಆದರ್ಶ ಕನ್ನಡ ಬಳಗವು ರಾಷ್ಟ್ರ ಮಟ್ಟದ ಅಂತರ್ಜಾಲ ಗಾಯನ ಸ್ಪರ್ಧೆ ಆಯೋಜಿಸಿದ್ದರು. ಈ ಮುಂಚಿತವಾಗಿ ಆದರ್ಶ ಕನ್ನಡ ಬಳಗವು ಕಥಾಕಥನ ಸ್ಪರ್ಧೆ, ವಚನ ಗಾಯನ ಸ್ಪರ್ಧೆ, ರಸಪ್ರಶ್ನೆ ಸ್ಪರ್ಧೆಗಳನ್ನು ಅಂತರ್ಜಾಲ್ ಮುಖಾಂತರ ಆಯೋಜನೆ ಮಾಡಿ ಆಸಕ್ತರಿಗೆ ವೇದಿಕೆ ಕಲ್ಪಿಸಿಕೊಟ್ಟಿದೆ.

ರಾಷ್ಟ್ರ ಮಟ್ಟ ಕನ್ನಡ ಹಾಡುಗಳ ಅಂತರ್ಜಾಲ ಮುಖಾಂತರ ಈ ಸ್ಪರ್ಧೆಯಲ್ಲಿ ಹಿರಿಯರ ವಿಭಾಗದಲ್ಲಿ ಸುಮಾರು 250 ಮತ್ತು ಕಿರಿಯರ ವಿಭಾಗದಲ್ಲಿ ಸುಮಾರು 150 ಗಾಯಕರು ಭಾಗವಹಿಸಿದ್ದರು. ಇವರೆಲ್ಲರೂ ಗಾಯನವನ್ನು ವಿಡಿಯೋ ಮಾಡಿ ವ್ಯಾಟ್ಸ್ ಆಫ್ ಮೂಲಕ ಆಯೋಜಕರಿಗೆ ಕಳುಹಿಸಿದ್ದಾರೆ. ಈ ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ನಾಡಿನ ಮೂಲೆ ಮೂಲೆಯಿಂದ ಕನ್ನಡ ಗಾಯಕರು ತಮ್ಮ ಉತ್ತಮ ಗಾಯನದೊಂದಿಗೆ ಭಾಗವಹಿಸುವ ಮೂಲಕ ಸ್ಪರ್ಧೆಗೆ ಮೆರಗು ತಂದು ಕೊಟ್ಟಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here