ಯುವಕನ ಬರ್ಬರ ಹತ್ಯೆ: ಕೊಲೆ ಮಾಡಿ ಕಸದಲ್ಲಿಟ್ಟ ಕಿಲಾಡಿ ಕೆಲ್ಲರ್ಸ್

0
270

ಕಲಬುರಗಿ: ನಗರ ಪೀರ್ ಬಂಗಾಲಿ ಮೈದಾನದ ಆವರಣದ ಕಸದ ತೊಟ್ಟಿಯಲ್ಲಿ ಯುವಕ ಓರ್ವನನ್ನು ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿರುವ ಘಟನೆ ಇಂದು ಗ್ರಾಮೀಣ ಪೊಲೀಸ್ ಠಾಣೆ ವ್ಯಪ್ತಿಯಲ್ಲಿ ನಡೆದಿದೆ.

ಬುಲಂದ ಪರ್ವೆಜ ಕಾಲೋನಿಯ ಹಾಸನ ಅಲಿ (22) ಕೊಲೆಯಾದ ಯುವಕ, ನಿನ್ನೆ ರಾತ್ರಿ ಸುಮಾರು 11ಕ್ಕೆ ಕೆಲ ಸ್ನೇಹಿತರ ಹಾಸನ ಅವರನ್ನು ಕರೆದುಕೊಂಡು ಹೋಗಿದ್ದು, ಇಂದು ಬೆಳಿಗ್ಗೆ ಇಲ್ಲಿನ ಪೀರ್ ಬಂಗಾಲಿ ಮೈದಾನದಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.

Contact Your\'s Advertisement; 9902492681

ಕೊಲೆಗೆ ನಿಖರ ಕಾರಣ ಮತ್ತು ಕೊಲೆ ಮಾಡಿದ ವ್ಯಕ್ತಿಗಳ ಮಾಹಿತಿ ಸದ್ಯ ಲಭ್ಯವಾಗಿಲ್ಲ. ಕೊಲೆ ಮಾಡಿ ಆರೋಪಿ ಪರಾರಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಬೆಳಿಗ್ಗೆ ಬಡವಾಣೆಯ ಜನರು ವ್ಯಾಯಮಕ್ಕೆ ತರಳುತ್ತಿದ ಸಂದರ್ಭದಲ್ಲಿ ವಿಷಯ ಬೆಳಕ್ಕಿಗೆ ಬಂದಿದ್ದು, ಜನರು ಬೆಚ್ಚಿಬಿದ್ದಿದ್ದಾರೆ.

ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸ್ ತನಿಖೆ ನಡೆಸುತ್ತಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here