ಚೀನಾದ ವಸ್ತುಗಳನ್ನು ಭಹಿಷ್ಕರಿಸಿ ಸ್ವದೇಶಿ ಬಳಸಿ:ಅಂಬಾರಾಯ ಅಷ್ಠಗಿ

0
54

ಕಲಬುರಗಿ: ನಂಬಿಕೆ ದ್ರೋಹಿ ಚೀನಾ ದೇಶ ಗಾಲ್ವಾನ್ ಕಣಿವೆಯಲ್ಲಿ ನಮ್ಮ ದೇಶದ ಯೋಧರ ಮೇಲೆ ಕಬ್ಬಿಣದ  ಮೊಳೆಯುಕ್ತ ರಾಡ್ಗಳಿಂದ ಭೀಕರವಾಗಿ ಹಲ್ಲೆಯ ಹೇಯ ಕೃತ್ಯ ಎಸಗಿರುವ ಚೀನಾ ವಸ್ತುಗಳನ್ನು ಬಹಿಷ್ಕರಿಸಿ ಸ್ವದೇಶಿ ವಸ್ತುಗಳನ್ನು ಬಳಸಲು ದೇಶವಾಸಿಗಳು ಮುಂದಾಗಬೇಕೆಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಹಾಗೂ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಅಂಬಾರಾಯ ಅಷ್ಠಗಿ ಹೇಳಿದ್ದಾರೆ.

Contact Your\'s Advertisement; 9902492681

ಚೀನಾದ ಅನಾಗರೀಕ ಕೃತ್ಯದಿಂದಲೇ ನಮ್ಮ ಯೋಧರು ಹುತಾತ್ಮರಾಗಿರುವ ಕುರಿತು ಬಿಬಿಸಿ ವರದಿಯಲ್ಲಿ  ಚೀನಾದ ಈ ಕುತಂತ್ರದ ಕುಟಿಲ ಸಂಚನ್ನು ಬಯಲುಮಾಡಿದೆ.  ನಂಬಿಕೆ ದ್ರೋಹಿ ಚೀನಾಕ್ಕೆ ನಮ್ಮ ದೇಶದ ಸೇನೆಯು ತಕ್ಕ ಪ್ರತ್ಯುತ್ತರ ನೀಡಿದೆ .ಸೇನೆಯ ವೀರ ಕಾರ್ಯಕ್ಕೆ ವಿಶ್ವವೆ ಮೆಚ್ಚುಗೆ ವ್ಯಕ್ತಪಡಿಸಿದೆ,ಇಡೀ ದೇಶ ಸೇನೆಯ ಜೋತೆಗಿದೆ.

ದೇಶದ ಪ್ರಜ್ಞಾವಂತ ನಾಗರೀಕರಾಗಿ ನಾವು ಗಡಿ ಪ್ರದೇಶಕ್ಕೆ ಹೋಗಿ ಚೀನಾ ವಿರುದ್ಧ ಯುದ್ಧ ಮಾಡಬೇಕಿಲ್ಲ, ನಾವು ದೇಶದಲ್ಲಿದ್ದುಕೊಂಡೇ ನಮ್ಮ ಮನೆಯಿಂದಲೇ ಚೀನಾದ ಎಲ್ಲ ವಸ್ತುಗಳನ್ನು ಸಂಪೂರ್ಣವಾಗಿ ಈಗಿನಿಂದಲೇ ಖರೀದಿಸುವುದನ್ನು ನಿಲ್ಲಿಸುವುದು ಹಾಗೂ ದೇಶಾದ್ಯಂತ ಚೀನಿ ವಸ್ತುಗಳನ್ನು ಬಹಿಷ್ಕರಿಸುವುದೇ ಚೀನಿಯರಿಗೆ ಸರಿಯಾದ ಪ್ರತ್ಯುತ್ತರವಾಗಲಿದ್ದು, ಇದುವೇ ಹುತಾತ್ಮರಾದ  ನಮ್ಮ ಸೈನಿಕರಿಗೆ ನಾವು ನೀಡುವ ನಿಜವಾದ ಶೃದ್ಧಾಂಜಲಿ ಎಂದು ಅಂಬಾರಾಯ ಅಷ್ಠಗಿ ಹೇಳಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here