ಸುರಪುರ: ತಾಲೂಕಿನ ಕಕ್ಕೇರಾ ಹೋಬಳಿಯಲ್ಲಿನ ಸರ್ಕಾರಿ ಪ್ರೌಢಶಾಲೆಗೆ ಶಾಸಕ ನರಸಿಂಹ ನಾಯಕ (ರಾಜುಗೌಡ) ಭೇಟಿ ನೀಡಿ ಇದೇ 25ನೇ ತಾರೀಖಿನಿಂದ ಆರಂಭಗೊಳ್ಳುವ ಹತ್ತನೆ ತರಗತಿ ಪರೀಕ್ಷೆಯ ಪೂರ್ವ ಸಿದ್ಧತೆ ಕುರಿತು ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಶಾಸಕ ರಾಜುಗೌಡ ಮಾತನಾಡಿ, ಈಗ ಕೊರೊನಾ ವೈರಸ್ ಹಾವಳಿ ಹೆಚ್ಚಾಗಿದ್ದು ಮಕ್ಕಳ ಬಗ್ಗೆ ಹೆಚ್ಚು ನಿಗಾವಹಿಸುವಂತೆ ತಿಳಿಸಿದರು.ಪರೀಕ್ಷಾ ಸಮಯದಲ್ಲಿ ಬರುವ ಎಲ್ಲಾ ವಿದ್ಯಾರ್ಥಿಗಳಿಗೆ ಮಾಸ್ಕ್ ವಿತರಿಸಿ, ಸ್ಯಾನಿಟೈಜರ್ ನೀಡಿ ಹಾಗೂ ಫೀವರ್ ಚೆಕ್ ಮಾಡಿ ಮತ್ತು ಸಾಮಾಜಿಕ ಅಂತರ ಕಾಪಾಡುವಂತೆ ನೋಡಿಕೊಳ್ಳುವಂತೆ ಸೂಚಿಸಿದರು.
ಶಾಲೆಗೆ ಇನ್ನೊಮ್ಮೆ ಸ್ಯಾನಿಟೈಜರ್ ಸಿಂಪಡಣೆ ಮಾಡಿಸಿ ಯಾವುದೇ ವಿದ್ಯಾರ್ಥಿಗೆ ಪರೀಕ್ಷಾ ಸಮಯದಲ್ಲಿ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ನೋಡಿಕೊಳ್ಳುವ ಹೊಣೆ ಎಲ್ಲರ ಮೇಲಿದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಆದಪ್ಪ ಸುರಪುರಕರ್ ಮುಖಂಡರಾದ ಶ್ಯಾಮಸುಂದರ್ ಶೆಟ್ಟಿ ಪರಮಣ್ಣ ಪೂಜಾರಿ ರಮೇಶ್ ಶೆಟ್ಟಿ ಭೂ ನ್ಯಾಯ ಮಂಡಳಿ ಸದಸ್ಯ ಪ್ರಕಾಶ ಕುಂಬಾರ ಎಪಿಎಂಸಿ ಸದಸ್ಯ ಬಸವರಾಜ ಆರ್ಯಶಂಕರ ಶಾಲಾ ಪ್ರಧಾನಗುರು ಬಸವರಾಜ ಕೊಳೂರ ಇತರರಿದ್ದರು.