ನಗರಗಳಂತೆ ಗ್ರಾಮಗಳು ಅಭಿವೃದ್ಧಿ: ಭೈರತಿ ಬಸವರಾಜ್

0
26

ಶಹಾಪುರ: ಯಡಿಯೂರಪ್ಪನವರ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಪಟ್ಟಣಗಳಂತೆ ಗ್ರಾಮಗಳು ಅಭಿವೃದ್ಧಿ ಪಥದತ್ತ ಸಾಗುತ್ತಿವೆ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ ಹೇಳಿದರು.

Contact Your\'s Advertisement; 9902492681

ಯಾದಗಿರಿಗೆ ಹೋಗುವ ಮಾರ್ಗ ಮಧ್ಯ ಹತ್ತಿಗೂಡೂರ ಗ್ರಾಮದಲ್ಲಿ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದರು. ಸೌದೆ ಹಾಗೂ ಗುಡಿಸಲು ಮುಕ್ತ ದೇಶ ಆಗಬೇಕು ಎಂಬ ಪ್ರಧಾನಿಯವರ ಮಹದಾಸೆಯಂತೆ ಬಿಪಿಎಲ್ ಕಾರ್ಡ್ ಹೊಂದಿರುವ ಬಡವರಿಗೆ ಉಚಿತ ಅನಿಲ ಹಾಗೂ ಆಶ್ರಯ ಯೋಜನೆಗಳು ಜಾರಿಗೆ ತಂದಿರುವುದು ಸಂತೋಷದ ಸಂಗತಿ ಎಂದು ನುಡಿದರು.

ಈ ಸಂದರ್ಭದಲ್ಲಿ ಸುರಪುರ ಶಾಸಕರಾದ ರಾಜುಗೌಡ ನರಸಿಂಹ ನಾಯಕ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರಾದ ಗೌಡಪ್ಪಗೌಡ ಮಾಲಿಪಾಟೀಲ್,ದೇವೇಂದ್ರಪ್ಪ ಪೂಜಾರಿ ಹಾಗೂ ಇತರರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here