ಡಿಕೆಶಿ ನನ್ನ ಮಿತ್ರನಲ್ಲ: ಕಲಬುರಗಿಯಲ್ಲಿ ಸಚಿವ ಜಾರಕಿಹೊಳಿ ಹೇಳಿಕೆ

0
69

ಕಲಬುರಗಿ: ಡಿಕೆಶಿ ನನ್ನ ಮಿತ್ರನಲ್ಲ, ಅವರು ಒಂದು ಪಕ್ಷದ ಅಧ್ಯಕ್ಷರಷ್ಟೇ ಎಂದು ಸಚಿವ ರಮೇಶ್ ಜಾರಕಿಹೊಳಿ ಜಿಲ್ಲೆಯ ಅಫಜಲಪೂರ ತಾಲ್ಲೂಕಿನಲ್ಲಿ ಖಾರವಾಗಿ ಪ್ರತಿಕ್ರಿಯಿಸಿದರು.

Contact Your\'s Advertisement; 9902492681

ಡಿ.ಕೆ ಶಿವಕುಮಾರ ಪದಗ್ರಹಣದ ಕುರಿತು ಮಾಧ್ಯಮದ ಪ್ರಶ್ನೆಗಳಿಗೆ ಉತ್ತರಿಸಿ ಮಾತನಾಡಿದ ಸಚಿವರುಜನರ ಮುಂದೆ ಡಿಕೆಶಿ ಅಧಿಕಾರ ಸ್ವೀಕರಿಸುತ್ತಿಲ್ಲ. ಬರೀ ಟಿವಿ ಮುಂದೆ ಪ್ರಮಾಣ ಸ್ವೀಕರಿಸುತ್ತಿದ್ದಾರೆ. ಹಾಗಾಗಿ ಇದಕ್ಕೆ ಹೆಚ್ಚು ಮಹತ್ವ ಕೊಡಬೇಕಿಲ್ಲ. ಡಿಕೆಶಿ ಶಕ್ತಿ ಏನು ಅಂತಾ ನನಗೆ ಗೊತ್ತೆಂದು ಆಭಿಪ್ರಾಯ ವ್ಯಕ್ತಪಡಿಸಿದರು.

ಸಚಿವ ಜಾರಿಕಿಹೊಳಿ ಜಿಲ್ಲಾಡಳಿತ ಆದೇಶ ಉಲ್ಲಂಘನೆ: ಇದ್ದಕ್ಕೂ ಮುನ್ನ ಅಫಜಲಪೂರ ತಾಲ್ಲೂಕಿನ ಗಾಣಗಾಪುರದ ದತ್ತನ ದರ್ಶನ ಪಡೆಯುವ ಮೂಲಕ ಸಚಿವ ರಮೇಶ್ ಜಾರಿಕಿಹೊಳಿ ಜಿಲ್ಲಾಡಳಿತ ಆದೇಶವನ್ನು ಉಲ್ಲಂಘಿಸಿದ್ದಾರೆ. ಕೊರೊನಾ ಎದುರಿಸುವ ಹಿನ್ನೆಲೆಯಲ್ಲಿ ಜು. 7ರ ವರೆಗೆ ದತ್ತನ ದೇವಸ್ಥಾನ ದರ್ಶನಕ್ಕೆ ಬಂದ್ ಮಾಡುವಂತೆ ಕಲಬುರಗಿ ಜಿಲ್ಲಾಧಿಕಾರಿ ಶರತ್ ಬಿ ಆದೇಶ ಹೊರಡಿಸಿದ್ದಾರೆ. ಜಿಲ್ಲಾಡಳಿತ ಆದೇಶವನ್ನು ಮೀರಿ ಇಂದು ಮುಂಜಾನೆ ಸಚಿವರು ದತ್ತಾತ್ರೇಯನ ದರ್ಶನ ಪಡೆದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here