ಕಲಬುರಗಿ: ಇಂದು ಬೆಂಗಳೂರಿನಲ್ಲಿ ಆಯೋಜಿಸಿರುವ ಕೆಪಿಸಿಸಿ ನೂತನ ಅಧ್ಯಕ್ಷ ಡಿ,ಕೆ ಶಿವುಕುಮಾರ ಪದಗ್ರಹಣ ಪ್ರತಿಜ್ಞಾ ಕಾರ್ಯಕ್ರಮವನ್ನು ಜಿಲ್ಲಾ ಕಾಂಗ್ರೆಸ್ ಪಕ್ಷದ ಅಲ್ಪಸಂಖ್ಯಾತರ ಘಟಕ ಮುಖಂಡರಾದ ವಾಹೇದ್ ಅಲಿ ಫಾತೇಕಾನಿ ನೇತೃತ್ವದಲ್ಲಿ ಅವರ ನಿವಾಸದಲ್ಲಿ ಪಕ್ಷದ ಜಿಲ್ಲಾ ಮುಖಂಡರು ಹಾಗೂ ಕಾರ್ಯಕರ್ತರು ವೀಕ್ಷಿಸಿದರು.
ಡಿ.ಕೆ ಶಿವುಕುಮಾರ ಕಾರ್ಯಕ್ರಮದ ವಿಶೇಷ ಸಮಿತಿ ಬಕ್ಕಪ್ಪ ಕೊಟೆ, ಮಹಾನಗರ ಪಾಲಿಕೆಯ ಮಾಜಿ ಮಹಾಪೌರರಾದ ಸೈಯದ್ ಅಹ್ಮದ್, ಆದೀಲ್ ಸುಲೇಮಾನ್ ಸೇಠ್, ಸಾಜಿದ್ ಅಲಿ ರಂಜೋಳ್ವಿ, ಸಾದತ್ ಹುಸೇನ್, ಖೂಸ್ರೊ ಜಾಗಿರದಾರ, ಅಖೀಲ್ ಅನ್ಸಾರಿ, ಅಮಜದ್ ಸೇರಕರ್, ನದೀಮ್ ಸೇರಕರ್, ಮಿರ್ಜಾ ಗಯಾಜ್ ಬೇಗ್, ಆಸೀಫ್ ಸೇರಿದಂತೆ ಹಲವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.